Advertisement

ಪಂಚಕುಲ:ಪಿಯು ವಿದ್ಯಾರ್ಥಿಯ ಹತ್ಯೆ;9ನೇ ಕ್ಲಾಸ್‌ ವಿದ್ಯಾರ್ಥಿ ಅರೆಸ್ಟ್

10:58 AM Sep 19, 2018 | Team Udayavani |

ಪಂಚಕುಲ(ಹರ್ಯಾಣ): ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಇರಿದುಕೊಂದ ಆರೋಪಿಯಾಗಿರುವ 9 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿರುವ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. 

Advertisement

ಸೆಕ್ಟರ್‌ 7 ರಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಗಣದಲ್ಲಿ ಪಿಯುಸಿ ವಿದ್ಯಾರ್ಥಿ ವಿಕಾಸ್‌ ಕುಮಾರ್‌ನನ್ನು ಸೆಪ್ಟಂಬರ್‌ 17 ರಂದು ಇರಿದು ಹತ್ಯೆಗೈಯಲಾಗಿತ್ತು.ದಾಳಿ ವೇಳೆ ತಡೆಯಲು ಬಂದಿದ್ದ 10 ನೇ ತರಗತಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದ.

ಚುಡಾವಣೆಯನ್ನು ವಿರೋಧಿಸಿದ ಕಾರಣಕ್ಕೆ  ವಿಕಾಸ್‌ ಹತ್ಯೆ ನಡೆದಿದೆ ಎನ್ನುವ ವಿಚಾರ ಪೊಲೀಸ್‌ ತನಿಖೆಯ ವೇಳೆ ತಿಳಿದು ಬಂದಿದೆ.

ಹತ್ಯೆಯಲ್ಲಿ ಇನ್ನು ಕೆಲ ಅಪ್ರಾಪ್ತ ವಯಸ್ಕ ಬಾಲಕರು ಭಾಗಿಯಾಗಿದ್ದು ಅವರನ್ನೂ ಪೊಲೀಸರು ಬಂಧಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next