Advertisement

ಆಸ್ತಿ ವಿಚಾರಕ್ಕೆ ಘರ್ಷಣೆ: ಗಾಯಾಳು ಸಾವು

10:36 PM Mar 05, 2023 | Team Udayavani |

ವಿಟ್ಲ: ವಿಟ್ಲಕಸಬಾ ಗ್ರಾಮದ ದಾಸರಬೆಟ್ಟು ಎಂಬಲ್ಲಿ ಆಸ್ತಿ ವಿಚಾರಕ್ಕೆ ಸಂಬಂ ಧಿಸಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇಬ್ರಾಹಿಂ (88) ಮೃತಪಟ್ಟಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Advertisement

ಸುಲೈಮಾನ್‌, ಅಬೂಬಕ್ಕರ್‌, ಹಸೈನಾರ್‌ ಹಾಗೂ ನಾಸೀರ್‌ ಆರೋಪಿಗಳು. ಈ ಪೈಕಿ ಸುಲೈಮಾನ್‌ ಮತ್ತು ನಾಸೀರ್‌ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿ ಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

ಪ್ರಕರಣದ ವಿವರ
ಇಬ್ರಾಹಿಂ ಮತ್ತು ಅವರ ಅಣ್ಣ ದಿ| ಮಮ್ಮದೆ ಬ್ಯಾರಿ ಅವರ ಮಕ್ಕಳಾದ ಸುಲೈಮಾನ್‌, ಅಬೂಬಕ್ಕರ್‌ ಹಾಗೂ ಹಸೈನಾರ್‌ ಅವರ ನಡುವೆ ಜಮೀನಿಗೆ ಸಂಬಂಧಿಸಿ ಗಲಾಟೆ ನಡೆಯುತ್ತಿತ್ತು. ಒಮ್ಮೆ ರಾಜಿ ಸಂಧಾನ ನಡೆದಿತ್ತಾದರೂ ಮಮ್ಮದೆ ಬ್ಯಾರಿ ಅವರ ಜಮೀನು ನೋಂದಣಿಗೆ ಬಾಕಿ ಇತ್ತು. ಅವರ ಮಕ್ಕಳು ಈ ಬಗ್ಗೆ ತಕರಾರು ಮಾಡುತ್ತಿದ್ದರು. ಫೆ.21ರಂದು ಇಬ್ರಾಹಿಂ ಅವರು ಬೆಳಗ್ಗೆ ತೋಟಕ್ಕೆ ಹೋಗಿದ್ದಾಗ ಸುಲೈಮಾನ್‌, ಅಬೂಬಕ್ಕರ್‌, ಹಸೈನಾರ್‌ ಹಾಗೂ ನೆರೆಯ ನಾಸೀರ್‌ ಅವರು ಗಲಾಟೆ ನಡೆಸಿದ್ದರು. ಆರೋಪಿಗಳು ತೋಟದಲ್ಲಿದ್ದ ಕಲ್ಲು ಹಾಗೂ ಮರದ ತುಂಡೊಂದನ್ನು ಇಬ್ರಾಹಿಂ ಅವರತ್ತ ಎಸೆದಾಗ ಮರದ ಅವರ ತಲೆಯ ಬಲಭಾಗಕ್ಕೆ ತಾಗಿ ಗಂಭಿರ ಗಾಯಗೊಂಡಿದ್ದರು. ಅವರನ್ನು ಪುತ್ರ ಅಬ್ದುಲ್‌ ಲತೀಫ್‌ ಆಸ್ಪತ್ರೆಗೆ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next