Advertisement

CJI; ಸರಕಾರದ ಮುಖ್ಯಸ್ಥರ ಭೇಟಿಯಾದರೆ ಡೀಲಾಯಿತು ಎಂದರ್ಥವಲ್ಲ

01:32 AM Oct 28, 2024 | Team Udayavani |

ಮುಂಬಯಿ: ಸರಕಾರದ ಮುಖ್ಯಸ್ಥರನ್ನು ನ್ಯಾಯ ಮೂರ್ತಿಗಳು ಭೇಟಿಯಾದರೆ ಯಾವುದೋ ಒಪ್ಪಂದ ನಡೆಯಿತು ಎಂದರ್ಥವಲ್ಲ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ನಗರದಲ್ಲಿ ಮಾತನಾ­ಡಿದ ಅವರು, ನಾವು ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಬೇಕಾಗುತ್ತದೆ. ಏಕೆಂದರೆ ಅವರು ನ್ಯಾಯಾಂಗಕ್ಕೆ ಬಜೆಟ್‌ ಒದಗಿಸುತ್ತಾರೆ. ಆದರೆ ಈ ಬಜೆಟ್‌ ಜಡ್ಜ್ಗಳಿಗಾಗಿ ಅಲ್ಲ. ನಾವು ಕೇವಲ ಪತ್ರಗಳನ್ನೇ ನೆಚ್ಚಿ ಕುಳಿತರೆ ನಮ್ಮ ಕೆಲಸ ಆಗುವುದಿಲ್ಲ. ನಾವು ಭೇಟಿ ಆಗುವಾಗ ರಾಜಕೀಯ ಪ್ರಬುದ್ಧತೆ ಇರುತ್ತದೆಯೇ ವಿನಾ ಯಾರೂ ಪೆಂಡಿಂಗ್‌ ಕೇಸ್‌ಗಳ ಬಗ್ಗೆ ಮಾತನಾಡಿದ್ದಿಲ್ಲ ಎಂದರು. ಸಾರ್ವಜನಿಕ ಅಭಿಪ್ರಾಯದಂತೆ ಈ ಭೇಟಿಗಳಲ್ಲಿ ಯಾವುದನ್ನು ನಾವು “ಅಡೆjಸ್ಟ್‌’ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಂಡಿತ ಅರ್ಥಮಾಡಿಕೊಳ್ಳಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next