Advertisement

ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರಕಾರ್ಮಿಕರು ಅನಿವಾರ್ಯ: ಭಟ್‌

06:20 AM Sep 28, 2018 | Team Udayavani |

ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರಾಯುಕ್ತರು ಇಲ್ಲದಿದ್ದರೂ ತೊಂದರೆ ಇಲ್ಲ. ಪೌರಕಾರ್ಮಿಕರಿಲ್ಲದಿದ್ದರೆ ಆಡಳಿತ ನಡೆಸಲಾಗುವುದಿಲ್ಲ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

Advertisement

ಅವರು ಪುರಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರಕಾರ್ಮಿಕರದ್ದು ಗೌರವಾನ್ವಿತ ಕೆಲಸ. ನಗರಸಭೆಗೆ ಸ್ವತ್ಛತೆಗೆ ಯಾವುದೇ ಪ್ರಶಸ್ತಿ ಬಂದಿದ್ದಲ್ಲಿ ಅದು ಪೌರಕಾರ್ಮಿಕರಿಗೆ ಸಲ್ಲುತ್ತದೆ. ಅದು ಅವರ ಶ್ರಮಕ್ಕೆ ಬಂದ ಪ್ರಶಸ್ತಿ ಎಂದರು.ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಜಿ. ಚಂದ್ರಶೇಖರ್‌ ಆರೋಗ್ಯ ಮಾಹಿತಿ ನೀಡಿ, ಸರಿಯಾದ ಆಹಾರ ಪದ್ದತಿಯಿಂದ ಆರೋಗ್ಯಕರ ಜೀವನ ನಡೆಸಬಹುದು.

ಪ್ರತಿಯೊಂದು ಕೂಡ ಮಿತಿಯಾಗಿರಬೇಕು. ಅತೀಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. 
ಪೌರಕಾರ್ಮಿಕರ ದಿನಾಚರಣೆಯಂದು ಸರಕಾರ ನೀಡುವ 3,500 ರೂ.ಗಳನ್ನು ಪೌರಕಾರ್ಮಿಕರಿಗೆ ನೀಡಲಾಗುವುದು ಎಂದು ಆಯುಕ್ತ ಜನಾರ್ದನ್‌ ಈ ಸಂದರ್ಭ ಘೋಷಿಸಿದರು. 

ಈ ಸಂದರ್ಭ ಉತ್ತಮ ಕಾರ್ಯ ನಿರ್ವಹಿಸಿದ ಐವರು ಪೌರಕಾರ್ಮಿಕರಿಗೆ ಸಮ್ಮಾನಿಸಲಾಯಿತು. ಉದ್ಯಮಿ ಜೆರ್ರಿ ವಿನ್ಸೆಂಟ್‌ ಡಯಾಸ್‌ ಪೌರಕಾರ್ಮಿಕರಿಗೆ ಉಡುಗೊರೆಯನ್ನು ವಿತರಿಸಿದರು. ವೇದಿಕೆಯಲ್ಲಿ ಎಂಜಿನಿಯರ್‌ಗಳಾದ ರಾಘವೇಂದ್ರ, ಗಣೇಶ್‌ ಉಪಸ್ಥಿತರಿದ್ದರು.
 ಕರುಣಾಕರ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ  ನಿರೂಪಿಸಿದರು. ರಾಘವೇಂದ್ರ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next