Advertisement

‘ಸಿಎಎ ಬೇಡದಿದ್ದರೆ ಪಾಕಿಸ್ಥಾನಕ್ಕೆ ಹೋಗು…’ಎಂದ ಶಿಕ್ಷಕನನ್ನು ಮನೆಗೆ ಕಳುಹಿಸಿದ ಇಲಾಖೆ!

10:20 AM Jan 18, 2020 | Team Udayavani |

ತ್ರಿಶೂರ್‌: ರಾಷ್ಟ್ರಾದ್ಯಂತ ಸಿಎಎ ಪರ -ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ವಿಚಿತ್ರ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ. ತ್ರಿಶೂರ್‌ನ ಕೊಡುಂಗಲ್ಲೂರ್‌ ಶಾಲೆಯಲ್ಲಿ ಮಕ್ಕಳಿಗೆ ಸಿಎಎ ಅನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದರೆ ಪಾಕ್‌ಗೆ ನಡಿಯಿರಿ ಎಂದು ವಿದ್ಯಾರ್ಥಿನಿಗೆ ಶಿಕ್ಷಕ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ವಿರುದ್ಧ ಇಂತಹ ಹೇಳಿಕೆ ನೀಡಿದ ಶಿಕ್ಷಕನನ್ನೇ ಶಾಲೆಯಿಂದ ಹೊರ ಕಳುಹಿಸಿದ ಪ್ರಸಂಗ ನಡೆದಿದೆ.

Advertisement

ಶಾಲೆಯ ಹಿಂದಿ ಶಿಕ್ಷಕ ಕಲೇಶನ್‌ ಎಂಬವರು ಈ ಕ್ರಮಕ್ಕೆ ಒಳಗಾದವರು. ವಿದ್ಯಾರ್ಥಿಗೆ ಈ ರೀತಿ ಹೇಳಿದ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಮಾತ್ರವಲ್ಲದೇ ವಿದ್ಯಾರ್ಥಿನಿಯ ತಂದೆ ಶಿಕ್ಷಣ ಇಲಾಖೆಗೆ ಸಾಮಾಜಿಕ ಜಾಲತಾಣಗಳ ಮೂಲಕ ದೂರು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ಶಿಕ್ಷಣ ಇಲಾಖೆ ಆರೋಪಿ ಶಿಕ್ಷಕನನ್ನು ಶಾಲೆಯಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next