Advertisement

ಕಲಬುರಗಿ: ಸರ್ಕಲ್ ಇನ್ಸಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

07:14 PM Sep 25, 2022 | Team Udayavani |

ಕಲಬುರಗಿ: ಮಹಾರಾಷ್ಟ್ರ ದಲ್ಲಿ ಗಾಂಜಾ ದಂಧೆಕೋರರಿಂಧ ಭೀಕರ ಹಲ್ಲೆಗೊಳಗಾಗಿರುವ ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸೊಮವಾರ ಏರ್ ಬಸ್ ಮೂಲಕ ಕರೆದೊಯ್ಯಲಾಗುತ್ತಿದೆ.‌

Advertisement

ಗಾಂಜಾ ದಂಧೆಕೋರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಇಲ್ಲಾಳ್  ಅವರ ಏರ್ ಲಿಫ್ಟ್ ಗಾಗಿ ಕೊಚ್ಚಿಯಿಂದ ಆಗಮಿಸಿದ ಏರ್ ಅಂಬ್ಯೂಲೆನ್ಸ್ ರವಿವಾರ ಸಂಜೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದೆ.

ರವಿವಾರ ಸಂಜೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಏರ್ ಅಂಬ್ಯೂಲೆನ್ಸ್ ಸೋಮವಾರ (ಸೆ. 26)  ಬೆಳಿಗ್ಗೆ ಮತ್ತೊಂದು ವೈದ್ಯರ ಸಲಹೆ ಪಡೆದು ಸಿಐಪಿ ಶ್ರೀಮಂತ ಇಲ್ಲಾಳರನ್ನು  ಬೆಂಗಳೂರಿಗೆ ಶಿಫ್ಟ್ ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.‌

ಇಲ್ಲಾಳ ಕುಟುಂಬಸ್ಥರು ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಬಯಸಿದ್ದರಿಂದ  ಏರ್ ಬಸ್ ವ್ಯವಸ್ಥೆ ಮಾಡಿದೆ. ಯುನೈಟೆಡ್ ಆಸ್ಪತ್ರೆಯಲ್ಲಿ ನುರಿತ ಹತ್ತು ವೈದ್ಯರ ತಂಡ ತೀವ್ರ ಚಿಕಿತ್ಸೆ ಮುಂದುವರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next