Advertisement

ಸಿನಿಮೀಯ ರೀತಿ ಕಾರಿನಲ್ಲಿ ಬಂದು ಕುರಿ ಕಳ್ಳತನ

11:54 AM Jul 15, 2022 | Team Udayavani |

ದೊಡ್ಡಬಳ್ಳಾಪುರ: “ತಿಥಿ’ ಸಿನಿಮಾ ರೀತಿ ವಾಹನದಲ್ಲಿ ಬಂದು ಕುರಿಗಳನ್ನು ಕದ್ದಿರುವ ಘಟನೆ ತಾಲೂಕಿನ ರಾಜ ಘಟ್ಟ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.

Advertisement

ಸಿನಿಮಾದಲ್ಲಿ ಯುವಕರು ಟ್ರ್ಯಾಕ್ಟರ್‌ನಲ್ಲಿ ಬಂದು ಕದ್ದರೆ, ಇಲ್ಲಿ ಕ್ವಾಲಿಸ್‌ ಕಾರಿನಲ್ಲಿ ಬಂದು ಕಳುವು ಮಾಡಲಾಗಿದೆ. ಸಿನಿಮಾದಲ್ಲಿ ಕುರಿಗಾಹಿಗಳು ಮೋಜು ಮಸ್ತಿ ಮಾಡುತ್ತಿದ್ದಾಗ ಕೃತ್ಯ ನಡೆದಿತ್ತು. ಆದರೆ, ಈ ಗ್ರಾಮದಲ್ಲಿ ಕುರಿ ಮಾಲೀಕರು ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಕ್ವಾಲಿಸ್‌ ಕಾರಿನಲ್ಲಿ ಬಂದ ಕಳ್ಳರು 15ಕ್ಕೂ ಹೆಚ್ಚು ಕುರಿ- ಮೇಕೆಗಳನ್ನು ಕದಿಯಲಾಗಿದೆ.

ರಾಜಘಟ್ಟ ಗ್ರಾಮದ ಓಬಳೇಶ್‌ ಅವರು ತಮ್ಮ ಕುರಿ-ಮೇಕೆ ಗಳನ್ನು ಮನೆಯ ಬಳಿಯಿರುವ ದೊಡ್ಡಿಯಲ್ಲಿ ಕೂಡಿ ಹಾಕಿ ಪ್ರವಾಸಕ್ಕೆ ತೆರಳಿದ್ದರು.

ಬುಧವಾರ ರಾತ್ರಿ 1 ಗಂಟೆಯ ಸಮಯದಲ್ಲಿ ಕಾರಲ್ಲಿ ಬಂದ ನಾಲ್ವರು ಕಳ್ಳರು ಕುರಿ-ಮೇಕೆಗಳನ್ನು ಕಳವು ಮಾಡಿದ್ದಾರೆ. ಶಬ್ದ ಕೇಳಿ ಓಬಳೇಶ್‌ ಅವರ ತಾಯಿ ಹೊರಬಂದು ನೋಡಿ ಕೂಗಿಕೊಂಡಿದ್ದು, ಓಬಳೇಶ್‌ ತಂಗಿ ಮಗ ಸೃಜನ್‌ ಆಟೋದಲ್ಲಿ ಬೆನ್ನತ್ತಲು ಪ್ರಯತ್ನಿಸಿದರಾದರು ಕಾರಲ್ಲಿದ್ದ ಕಳ್ಳರು ರಾಡ್‌ಗಳನ್ನು ತೋರಿಸಿ ಬೆದರಿಸಿದ್ದಾರೆ.

ಇದನ್ನೂ ಓದಿ: ಮಸೀದಿ ಅಧ್ಯಕ್ಷ ಅಯುಬ್‌ ಹತ್ಯೆ: ಮಸೀದಿ ಅಧ್ಯಕ್ಷ ಸ್ಥಾನ, ಆಸ್ತಿ ವಿಚಾರಕ್ಕೆ ಕೃತ್ಯ

Advertisement

ಕೂಡಲೇ ತಿಮ್ಮಸಂದ್ರ ಗ್ರಾಮದಲ್ಲಿ ಕಾರನ್ನು ಅಡ್ಡಗಟ್ಟುವಂತೆ ಸೃಜನ್‌ ಗ್ರಾಮಸ್ಥರಿಗೆ ಕರೆ ಮಾಡಿದ್ದು, ಈ ವೇಳೆ ಗ್ರಾಮಸ್ಥರು ತಡೆಯಲು ಮುಂದಾದರೂ ವೇಗವಾಗಿ ಕಾರನ್ನು ಚಲಾಯಿಸಿ ಪರಾರಿ ಯಾಗಿದ್ದಾರೆಂದು ಸೃಜನ್‌ ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next