Advertisement

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

01:38 PM May 30, 2020 | Naveen |

ಚಿತ್ರದುರ್ಗ: ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಹಲ್ಲೆಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು.

Advertisement

ಕುಡಿದು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಉಗ್ರ ಶಿಕ್ಷೆ ನೀಡಬೇಕು ಹಾಗೂ ಮದ್ಯ ನಿಷೇಸಬೇಕು. ಕೋವಿಡ್‌ 19 ಸೇವೆಯಲ್ಲಿರುವಾಗ ಸಾವಿಗೀಡಾದ ಆಶಾ ಕುಟುಂಬಕ್ಕೆ 50 ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಮೇ 29ರ ದಿನವನ್ನು ಆಶಾ ಸಂರಕ್ಷಣಾ ದಿನವೆಂದು ಘೋಷಿಸಬೇಕು. ಕೋವಿಡ್‌-19 ಕಾರ್ಯ ನಿಯೋಜನೆ ಇರುವ ಅವಗೆ ವಿಶೇಷ ಪ್ಯಾಕೇಜ್‌ ಮಾಸಿಕ ಹತ್ತು ಸಾವಿರ ಘೋಷಿಸಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್‌, ಗ್ಲೌಸ್‌ಗಳನ್ನು ನೀಡಿ. ಇವರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಆಶಾ ಕಾರ್ಯಕರ್ತೆಯರಾದ ಗಿರಿಜಮ್ಮ, ಲಕ್ಷ್ಮೀ , ನೇತ್ರ, ಪಾತೀಮ, ಜಮೀಳ ಬೇಗಂ, ಸುಜಾತ, ಕುಮುದ ಮತ್ತು ಮೇಘನ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next