Advertisement

ಖೋ ಖೋ ಕ್ರೀಡಾಪಟು ಶ್ರೀನಿವಾಸ್‌ಗೆ ಸನ್ಮಾನ

03:58 PM Feb 25, 2021 | Team Udayavani |

ಚಳ್ಳಕೆರೆ: ನಗರದ ಅಶೋಕ ನ್ಪೋರ್ಟ್ಸ್ ಕ್ಲಬ್‌ನ ಖೋ ಖೋ ತಂಡದ ಆಟಗಾರ ಒ. ಶ್ರೀನಿವಾಸ್‌ ಅವರು ರಾಜ್ಯ ಖೋ ಖೋ ಸಂಸ್ಥೆಯ ಜಂಟಿ
ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಶೋಕ ನ್ಪೋರ್ಟ್ಸ್ ಕ್ಲಬ್‌ ವತಿಯಿಂದ ಶ್ರೀನಿವಾಸ್‌ ಅವರನ್ನು
ಅಭಿನಂದಿಸಿ ಸನ್ಮಾನಿಸಲಾಯಿತು.

Advertisement

ನೂತನ ಜವಾಬ್ದಾರಿಯಲ್ಲಿ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ಖ್ಯಾತಿ ಗಳಿಸುವಂತೆ ಕ್ಲಬ್‌ ಕಾರ್ಯದರ್ಶಿ ನಾರಾಯಣರಾವ್‌ ಮೋಹಿತೆ ಆಶಿಸಿದರು. ಅಶೋಕ ನ್ಪೋರ್ಟ್ಸ್ ಕ್ಲಬ್‌ ಕಳೆದ ಹಲವಾರು ವರ್ಷಗಳಿಂದ ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಬಂದಿದೆ. ಹಲವಾರು ಆಟಗಾರರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಓ. ಶ್ರೀನಿವಾಸ್‌ ಖೋ ಖೋ ಪಂದ್ಯಾವಳಿಯನ್ನು ಹೆಚ್ಚೆಚ್ಚು ಆಯೋಜಿಸಿ ಆಟಗಾರರಿಗೆ ಉತ್ತೇಜನ ನೀಡಬೇಕೆಂದರು. ರಾಜ್ಯ ಖೋ ಖೋ ಸಂಸ್ಥೆಯ
ಜಂಟಿ ಕಾರ್ಯದರ್ಶಿ ಓ. ಶ್ರೀನಿವಾಸ್‌ ಮಾತನಾಡಿ, ನಾನು ಈ ಮಟ್ಟಕ್ಕೆ ಬೆಳೆಯಲು ಅಶೋಕ ನ್ಪೋರ್ಟ್ಸ್ ಕ್ಲಬ್‌ ಪ್ರಮುಖ ಕಾರಣ.

ನಾರಾಯಣರಾವ್‌ ಅವರ ಮಾರ್ಗದರ್ಶನದಲ್ಲಿ ನಾನು ಈ ಸಾಧನೆ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಖೋ ಖೋ ಪಂದ್ಯಾವಳಿಯನ್ನು ಹೆಚ್ಚೆಚ್ಚು ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎಂ. ಯತೀಶ್‌, ಪಾಪಣ್ಣ, ಮಂಜುನಾಥ, ಮರವಾಯಿ ಶ್ರೀನಿವಾಸ್‌, ಶ್ರೀಧರ್‌, ಅನಿಲ್‌ ಕುಮಾರ್‌, ರಾಜೇಶ್‌, ಸಿದ್ದೇಶ್‌, ನಾಗರಾಜು, ಶಿವಕುಮಾರ್‌, ವಿ. ವೀರೇಶ್‌, ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ಓದಿ : ವಿಟ್ಲದಲ್ಲಿ ಬೈಕ್- ಲಾರಿ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next