Advertisement

ಜನಪ್ರಿಯತೆ ಕುಂದಿದ್ದರಿಂದ ಉದ್ಧವ್‌ ಕಿತಾಪತಿ: ಸೋಮಣ್ಣ

04:21 PM Feb 01, 2021 | Team Udayavani |

ಚಿತ್ರದುರ್ಗ: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಜನಪ್ರಿಯತೆ ಕುಂದಿದೆ. ಅದಕ್ಕಾಗಿ ಏನೇನೋ ಮಾತನಾಡಿ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಲೇವಡಿ ಮಾಡಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆಗೆ ನಾನು ಪುಷ್ಟಿ ಕೊಡುತ್ತೇನೆ. ಠಾಕ್ರೆ ಉದ್ಧಟತನದ ಪರಮಾವ ಧಿಗೆ ಸಿಎಂ ಬಿಎಸ್‌ವೈ ಕೂಡ ತೀಕ್ಷಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಹಾಜನ್‌ ವರದಿಯೇ ಅಂತಿಮ ತೀರ್ಮಾನ. ನಮ್ಮ ರಾಜ್ಯದಲ್ಲಿರುವುದನ್ನು ಅಭಿವೃದ್ಧಿ ಮಾಡಲು ಯಾರನ್ನೋ ಕೇಳುವ ಅಗತ್ಯವಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಆ ಹುದ್ದೆಯ ಗಾಂಭೀರ್ಯ ಅರ್ಥ ಮಾಡಿಕೊಳ್ಳದೆ ಈ ರೀತಿ ಜನರನ್ನು ಎತ್ತಿ ಕಟ್ಟುವುದು ಮೂರ್ಖತನ. ಯುಗಾದಿಯೊಳಗೆ
ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಬಗ್ಗೆ ನಾವು
ಪ್ರತಿಕ್ರಿಯಿಸುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಖುದ್ದು ಅಮಿತ್‌ ಶಾ ಅವರೇ ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಸಿಎಂ ಎಂದು ಹೇಳಿದ್ದಾರೆ. ಆದರೆ ಯತ್ನಾಳ ಹೇಳಿದ್ದರ ಬಗ್ಗೆ ನನಗೇನೂ ಗೊತ್ತಿಲ್ಲ . ವಿಶ್ವನಾಥ್‌ ಅವರಿಗೆ ಮಂತ್ರಿ ಸ್ಥಾನ ಮುಗಿದು ಹೋದ
ವಿಚಾರ ಎಂದರು.

ಓದಿ : ಸ್ವತ್ಛ -ಆರೋಗ್ಯ ರಾಷ್ಟ್ರಕ್ಕಾ ಗಿ ಸೈಕಲ್‌ ಬಳಸಿ: ಲೋಖಂಡೆ

Advertisement

Udayavani is now on Telegram. Click here to join our channel and stay updated with the latest news.

Next