Advertisement

ಗುರುಭವನಕ್ಕೆ ಸೌಲಭ್ಯ ಕಲ್ಪಿಸಿ

04:20 PM Jan 28, 2021 | Team Udayavani |

ಹೊಳಲ್ಕೆರೆ: ಶಿಕ್ಷಕರ ಆಶಾಗೋಪುರ ಎನ್ನಲಾಗಿರುವ ಗುರುಭವನ ನಿರ್ಮಾಣ ಹಂತದಲ್ಲಿದ್ದು, ಸೂಕ್ತ ಅನುದಾನವಿಲ್ಲದೆ ಅನಾಥವಾಗಿ ಬಿಟ್ಟಿದೆ. ಹಾಗಾಗಿ 1400 ಶಿಕ್ಷಕರ ಕನಸಾಗಿರುವ ಶಿಕ್ಷಕರ ಗುರುಭವನಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಶಿಕ್ಷಕ ಸಂಘದ ಅಧ್ಯಕ್ಷ ಜಿ.ಎಂ.ಶಿವಣ್ಣ ಮನವಿ ಮಾಡಿದ್ದಾರೆ.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಂ.ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದ ಪರಿಣಾಮ ಶಿಕ್ಷಕರ ಸಂಘದ ಗುರುಭವನ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಶಿಕ್ಷಕ ಸಮುದಾಯದ ನಿ ಧಿ ಸೇರಿದಂತೆ ವಿವಿಧ ಅನುದಾನಗಳಲ್ಲಿ ನಿರ್ಮಾಣಗೊಂಡಿರುವ ಶಿಕ್ಷಕ ಗುರುಭವನವನ್ನು ದುರಸ್ತಿಗೊಳಿಸಿ ಶಿಕ್ಷಕರ ಸಮುದಾಯಕ್ಕೆ ಬೇಕಾದ ಶೈಕ್ಷಣಿಕ ತರಬೇತಿ, ಸಭೆ ಸಮಾರಂಭಗಳನ್ನು ಕೈಗೊಳ್ಳಲು ತುಂಬಾ ಅಗತ್ಯವಾಗಿದ್ದು, ಸೂಕ್ತ ಅನುದಾನ ನೀಡುವ ಮೂಲಕ ಮಾದರಿ ಗುರುಭವನವನ್ನಾಗಿ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು. ದೇವರಾಜಯ್ಯ, ಲೋಕೇಶ್‌, ಮಂಜುನಾಥ, ಸತೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಓದಿ : ಕಾಂಗ್ರೆಸ್‌ ಮತ್ತೂಂದು ಹೆಸರೇ ಭ್ರಷ್ಟಾಚಾರ

Advertisement

Udayavani is now on Telegram. Click here to join our channel and stay updated with the latest news.

Next