Advertisement

ಸಿದ್ಧಾಂತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿ: ಸುನೀಲ್‌ಕುಮಾರ್‌

04:01 PM Jan 28, 2021 | Team Udayavani |

ಚಿತ್ರದುರ್ಗ: ದೇಶ ಮೊದಲು ಎನ್ನುವ ಪರಿಕಲ್ಪನೆಯಡಿ ನಮ್ಮ ಹಿರಿಯರು ಕೆಲಸ ಮಾಡಿದ್ದಾರೆ. ನಮ್ಮ ಸಿದ್ಧಾಂತಕ್ಕಾಗಿ ಬದ್ಧತೆ ಹಾಗೂ ಪರಿಶ್ರಮದಿಂದ ನಾವು ಕೆಲಸ ಮಾಡಬೇಕು ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್‌ ಹೇಳಿದರು.

Advertisement

ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮಾತನಾಡಿದ ಅವರು, ಯಾರಿಗೋ ಬಾಲಂಗೋಚಿಯಾಗದೇ ಪರಿಶ್ರಮದ ಮೂಲಕ ಬೆಳೆದರೆ ಯುವ ಮೋರ್ಚಾ ಕಾರ್ಯಕರ್ತರು ಮುಂದೆ ದೇಶದ ನಾಯಕತ್ವ
ವಹಿಸಿಕೊಳ್ಳಬಹುದು. ಇಂದು ನಾಯಕರ ನಡುವೆ ಹೋಗಿ ಸೆಲ್ಫಿ  ತೆಗೆದುಕೊಂಡು ಫೇಸ್‌ಬುಕ್‌, ವಾಟ್ಸಾಪ್ ಆ್ಯಪ್‌ಗ್ಳಿಗೆ ಹಾಕಿಕೊಳ್ಳುವುದು, ಫ್ಲೆಕ್ಸ್‌ ಹಾಕಿಸಿಕೊಳ್ಳುವವರನ್ನೇ ಕಾಣುತ್ತಿದ್ದೇವೆ. ಆದರೆ, ನಿಜವಾದ ಕಾರ್ಯಕರ್ತ ಬದ್ಧತೆಯಿಂದ ತಾನು ನಂಬಿದ ಸಿದ್ಧಾಂತಕ್ಕಾಗಿ ರಚನಾತ್ಮಕ ಕೆಲಸ ಮಾಡುತ್ತಾನೆ ಎಂದರು.

ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದರ ಪರಿಣಾಮ ಇಂದು ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿ  ಕಾರದಲ್ಲಿದೆ. ಹಿಂದೆ ಬ್ಯಾನರ್‌ ಕಟ್ಟಲು ದುಡ್ಡಿಲ್ಲದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದರು. ಈಗ ಸುಖದ ಸುಪ್ಪತ್ತಿಗೆಯಲ್ಲಿದ್ದೇವೆ. ಮೈಮರೆತರೆ ಪತನವಾಗುವುದು ಖಚಿತ ಎಂದರು.

ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್‌ ಮಾತನಾಡಿ, ಜಾತಿವಾದ, ವಂಶವಾದ, ಭ್ರಷ್ಟಾಚಾರ, ತುಷ್ಟೀಕರಣದಿಂದ ರಾಜಕೀಯವನ್ನು ಮುಕ್ತಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಮಿತ್‌ ಶಾ ಅವರ ಕಲ್ಪನೆಯಂತೆ ಸ್ವಾವಲಂಬಿ ಬೂತ್‌ ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿ ಎಂದರು.

ಓದಿ :

Advertisement

“ಗಿರಿಜನ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next