Advertisement
ಚಿತ್ತಾಲರು ವಿಮರ್ಶಕರ ಹಂಗಿಲ್ಲದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರ ಶಿಕಾರಿ ಕಾದಂಬರಿ ಸಾಕಷ್ಟು ಜನಪ್ರಿಯವಾಯಿತು. ಈ ವೇಳೆ ಅವರ ವಿರುದ್ಧ ಪತ್ರಿಕೆಯೊಂದರಲ್ಲಿ ವಿಮರ್ಶೆ ಬರೆಸಲಾಯಿತು. ಈ ಸತ್ಯವನ್ನು ಇತ್ತೀಚೆಗಷ್ಟೇ ಆ ವಿಮರ್ಶೆ ಬರೆದವರು ತಮ್ಮ ಬಳಿ ನೋವಿನಿಂದ ಹೇಳಿಕೊಂಡಿದ್ದರು ಎಂದು ತಿಳಿಸಿದರು.
Related Articles
Advertisement
ಗೋಪಾಲಕೃಷ್ಣ ಅಡಿಗರು ಸೇರಿದಂತೆ ಹಲವು ಹೆಸರಾಂತ ಕನ್ನಡ ಸಾಹಿತಿಗಳು ಇಲ್ಲಿ ಸೇರುತ್ತಿದ್ದರು. ಹೀಗಾಗಿ ಕನ್ನಡ ಹೆಸರಾಂತ ಸಾಹಿತಿಗಳನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ಒದಗಿತ್ತು ಎಂದರು. ಇತ್ತೀಚಿನ ದಿನಗಳಲ್ಲಿ ಫಲಾಪೇಕ್ಷೆಯನ್ನಷ್ಟೇ ಬಯಸುವ ಪ್ರಕಾಶಕರು ಹುಟ್ಟಿಕೊಂಡಿದ್ದಾರೆ. ಇಂತವರಿಂದ ಉತ್ತಮ ಪುಸ್ತಕಗಳು ಮರು ಮುದ್ರಣ ಕಾಣುವುದು ಅಸಾಧ್ಯ.
ಒಳ್ಳೇಯ ಪ್ರಕಾಶಕರು ಸಾಹಿತಿಯೊಬ್ಬರ ಕೃತಿಗಳು ಖರ್ಚಾದ ತಕ್ಷಣವೆ ಮತ್ತೆ ಮರು ಮುದ್ರಣ ಮಾಡುತ್ತಾರೆ. ಕೃತಿಕಾರ ನಿಧನದ ನಂತರವೂ ಅದನ್ನು ಮುಂದುವರಿಸುತ್ತಾರೆ. ಆದರೆ ಈ ಮನೋಭಾವನೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್.ಸಿ.ಮುಕುಂದ್, ಮಾಜಿ ಅಧ್ಯಕ್ಷ ರಾಮನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.