Advertisement

ಶಾಸಕನಾದರೆ ಎಣ್ಣೆ, ಮಟನ್‌ ಉಚಿತವಂತೆ!

06:55 AM Apr 08, 2018 | Team Udayavani |

ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುರೇಶ್‌ ವೈ.ಎನ್‌.ಎಂಬುವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಇವರು ತಾಲೂಕಿನ ಯನಮಲಪಾಡಿ ಗ್ರಾಮದವರಾಗಿದ್ದು, “ನಾನ್ಯಾಕೆ ಎಂಎಲ್‌ಎ ಆಗಬಾರದು?’ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 

ನಾನು ಶಾಸಕನಾದರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ದನಿಯ, ಖಾರದ ಪುಡಿ ಮತ್ತು ಉಪ್ಪಿನಕಾಯಿ, 3 ಬಾರಿ ಊಟ ಮತ್ತು 2 ಬಾರಿ ಕಾಫಿ, ಟೀ, ವಾರಕ್ಕೆ 3 ಬಾರಿ ಚಿಕ್ಕನ್‌ ಮತ್ತು ಮಟನ್‌ (ಒಬ್ಬೊಬ್ಬರಿಗೆ 300 ಗ್ರಾಂ ), 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಮದ್ಯ (ತಿಂಗಳ ಲೆಕ್ಕದಲ್ಲಿ), ಎಲ್ಲಾ ಹಬ್ಬಗಳಿಗೆ ಉಚಿತ ಬಟ್ಟೆ, ಉಚಿತ ಆರೋಗ್ಯ, ಉಚಿತ ಸಾರಿಗೆ, ಉಚಿತ ಮೊಬೈಲ್‌ ಕರೆ ಮತ್ತು ಡೇಟಾ, ಮದುವೆಗೆ ಉಚಿತ ಮಾಂಗಲ್ಯ ಮತ್ತು ಬಟ್ಟೆ, ಉಚಿತ ಟಿವಿ ಕೇಬಲ್‌ ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next