Advertisement

ವೀಸಾ ಹಗರಣ: ಕಾರ್ತಿ ಚಿದಂಬರಂ ಅರ್ಜಿ ವಿರೋಧಿಸಿದ ಇ.ಡಿ.

01:14 AM Jun 09, 2022 | Team Udayavani |

ಹೊಸದಿಲ್ಲಿ: ವೀಸಾ ಹಗರಣದ ಆರೋಪಿಯಾಗಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರು ದಿಲ್ಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣ ಜಾಮೀನಿನ ಅರ್ಜಿ ವಿರುದ್ಧ ಜಾರಿ ನಿರ್ದೇಶನಾಲಯವು ವಾದಿಸಿದೆ.

Advertisement

“ಕಾರ್ತಿ ಅವರಿಗೆ ಬಂಧನ ಆತಂಕವಿಲ್ಲ. ನಾವು ಅವರಿಗೆ ಸಮನ್ಸ್‌ನೂ° ಕೊಟ್ಟಿಲ್ಲ. ಆದರೆ ಅದಕ್ಕೂ ಮೊದಲೇ ಅವರು ಜಾಮೀನು ಅರ್ಜಿ ಸಲ್ಲಿಸಿರುವುದು ಸರಿಯಲ್ಲ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ವಾದಿಸಿ ದ್ದಾರೆ. ನ್ಯಾಯಮೂರ್ತಿ ಪೂಣಂ ಎ. ಬಂಬಾ ಅವರು 3 ತಾಸುಗಳ ಕಾಲ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಿದ್ದಾರೆ.

ಕಾರ್ತಿ ಅವರ ಜಾಮೀನು ಅರ್ಜಿಯನ್ನು ಜೂ. 3ರಂದು ದಿಲ್ಲಿಯ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next