Advertisement

ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ

09:24 PM Jul 05, 2022 | Team Udayavani |

ಚಿಂಚೋಳಿ : ತಾಲ್ಲೂಕಿನಲ್ಲಿ ಕಳೆದ ಮಧ್ಯಾಹ್ನ 2 ಗಂಟೆಯಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ತಾಲ್ಲೂಕಿನ ಕೊಂಚಾವರಂ ಐನಾಪುರ ಚಿಮ್ಮನಚೋಡ ಸುಲೇಪೇಟ ಕೋಡ್ಲಿ ಐನಾಪುರ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ.
ಸಣ್ಣಪುಟ್ಟ ನಾಲೆಗಳು ತುಂಬಿ ಹರಿದಿವೆ.

ಕುಂಚಾವರಂ ಗಡಿಭಾಗದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಅನೇಕ ತಾಂಡಾಗಳಲ್ಲಿ ಜನರು ಕಗ್ಗತ್ತಲೆಯಲ್ಲಿ ಜೀವನ ಕಳೆಯಬೇಕಾಯಿತು.

ತಾಲ್ಲೂಕಿನಲ್ಲಿ ಸುರಿಯುತ್ತಿರುವ ಸಾಧಾರಣದಿಂದ ಕೂಡಿದ ಭಾರಿ ಮಳೆ ರೈತನ ಗಣಪೂರ್ ಖರ್ಚು ಕೇಡ್ ಭಕ್ತಂಪಳ್ಳಿ ಛತ್ರ ರಸ್ತೆಯಲ್ಲಿ ಭಾರಿ ತೆಗ್ಗು ಬಿದ್ದ ರಿಂದ ಲಾರಿ ಚಾಲಕರು ರಸ್ತೆಯಲ್ಲಿ ನೀರಿನ ಪ್ರಮಾಣ ಕಾಣದೆ ಇರುವುದರಿಂದ ರಸ್ತೆಯಲ್ಲಿ ಲಾರಿಗಳು ಸಿಕ್ಕಿಹಾಕಿಕೊಂಡಿವೆ.ಇದರಿಂದಾಗಿ ರಸ್ತೆ ವಾಹನ ಸಂಚಾರ ಇಲ್ಲದ ಕಾರಣ ಸಂ ಸಂಪೂರ್ಣವಾಗಿ ಸ್ಥಗಿತವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next