Advertisement

ಚಿಂಚೋಳಿ: ನದಿಯಲ್ಲಿ ಕೊಚ್ಚಿ ಹೋದ ತೆಲಂಗಾಣದ ದಂಪತಿಗಳು

05:46 PM Jul 27, 2022 | Team Udayavani |

ಚಿಂಚೋಳಿ: ತಾಲೂಕಿನ ಜಟ್ಟೂರ ಗ್ರಾಮದಲ್ಲಿ ಹರಿಯುವ ‌ಮುಲ್ಲಾಮಾರಿ‌‌ ನದಿಯ ನೀರಿನ ಪ್ರವಾಹಕ್ಕೆ ದಂಪತಿಗಳು ಕೊಚ್ಚಿ ‌ಹೋಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ನಡೆದಿದೆ.

Advertisement

ತೆಲಂಗಾಣ ರಾಜ್ಯದ ತಾಂಡೂರ ತಾಲೂಕಿನ ಮಂತಟಿ ಗ್ರಾಮದ ತರಕಾರಿ ವ್ಯಾಪಾರಿಗಳಾದ ಬುಗ್ಗಪ್ಪ ನರಸಪ್ಪ‌(58) ಪತ್ನಿ ಯಾದಮ್ಮ ಬುಗ್ಗಪ್ಪ ನಾಟೀಕಾರ ತರಕಾರಿ ಮಾರಾಟ ಮಾಡಿ ತಮ್ಮ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಕಡಿಮೆ ನೀರು ಇದೆ‌ ಎಂದು ಭಾವಿಸಿ ‌ಮುಲ್ಲಾಮಾರಿ ನದಿ ದಾಟುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ‌ಕೊಚ್ಚಿಕೊಂಡು ಹೋಗಿದ್ದಾರೆ.

ಇಂದು ಮೃತ ದೇಹಗಳು ನದಿ‌ದಂಡೆಯಲ್ಲಿ ಪತ್ತೆ‌ಯಾಗಿವೆ ಎಂದು ಸುಲೇಪೇಟ್ ಪೋಲಿಸರು ‌ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next