Advertisement

ಚಿಂಚೋಳಿ : ದುರಸ್ತಿ ವೇಳೆ ಗಾಯಗೊಂಡಿದ್ದ ಲೈನ್ ಮನ್ ಸಾವು

09:55 PM Apr 24, 2022 | Team Udayavani |

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಒಮ್ಮೆಲೆ ವಿದ್ಯುತ್ ಸ್ಪರ್ಶ ಉಂಟಾಗಿ ಸುಟ್ಟಗಾಯಗಳಿಂದ ಗಂಭೀರ ಗಾಯಗೊಂಡಿದ್ದ ಐನೊಳ್ಳಿ ಗ್ರಾಮದ ಖಾಸಗಿ ಲೈನ್ ಮನ್ ಹಾರುನ್ ಖಾನ್ ಪತ್ತೆಖಾನ ಚಿಕಿತ್ಸೆ ಫಲಕಾರಿಯಾಗದೆ ಇಂದು ರವಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆಂದು ಗ್ರಾಮದ ಮುಖಂಡ ಅಲ್ಲಾವುದ್ದೀನ್ ಅನ್ಸಾರಿ ತಿಳಿಸಿದ್ದಾರೆ.

Advertisement

ಕಳೆದ ಶನಿವಾರ ಐನೋಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ವಿದ್ಯುತ್ ತಂತಿ ಸರಿಪಡಿಸುವ ಸಂದ್ರದಲ್ಲಿ ಜೆಸ್ಕಾಂ ಸಿಬ್ಬಂದಿ ಮತ್ತು ಹಾರುನ್ ಖಾನ್ ಸುಟ್ಟಗಾಯಗಳಿಂದ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮೈ, ಕೈ ಕಾಲುಗಳಿಗೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಸುಟ್ಟಿದ ಗಂಭೀರವಾಗಿ ಗಾಯಗೊಂಡಿದ್ದ ಹಾರುನ್ ಖಾನ್ ಇಂದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ 7ಜನ ಮಕ್ಕಳು ಇದ್ದಾರೆ.ಮೃತನ ಕುಟುಂಬಕ್ಕೆ ಜೆಸ್ಕಾಂದಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಚಿಂಚೋಳಿ ಜೆಸ್ಕಾಂ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ಲಾವುದ್ದೀನ್ ಅನ್ಸಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next