Advertisement

ಗಡಿಯಿಂದ ಯೋಧರನ್ನು ವಾಪಸ್ ಕರೆಯಿಸಿಕೊಳ್ಳಿ; ಭಾರತಕ್ಕೆ ಚೀನಾ ಧಮ್ಕಿ

02:12 PM Jun 27, 2017 | Team Udayavani |

ಬೀಜಿಂಗ್/ನವದೆಹಲಿ: ಸಿಕ್ಕಿಂ ಗಡಿವಿವಾದದ ಬಗ್ಗೆ ಭಾರತ ಕ್ರಮ ತೆಗೆದುಕೊಳ್ಳದೆ ಹೋದರೆ ಯಾವುದೇ ಕಾರಣಕ್ಕೂ ಸಿಕ್ಕಿಂನ ನಾಥುಲಾ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಅವಕಾಶ ನೀಡಲ್ಲ ಎಂದು ಚೀನಾ ಭಾರತಕ್ಕೆ ಕಠಿಣ ಸಂದೇಶ ರವಾನಿಸಿದೆ.

Advertisement

ಭಾರತೀಯ ಸೇನಾಪಡೆ  ಸಿಕ್ಕಿಂ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗಡಿ ಪ್ರವೇಶಿಸಿದೆ ಎಂದು ಆರೋಪಿಸಿರುವ ಚೀನಾ, ಕೂಡಲೇ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. 

ಒಂದು ವೇಳೆ ಯೋಧರನ್ನು ವಾಪಸ್ ಕರೆಯಿಸಿಕೊಳ್ಳದಿದ್ದರೆ ಮಾನಸ ಸರೋವರ ಯಾತ್ರೆಗೆ ತೆರಳುವ ನಾಥುಲಾ ಪಾಸ್ ಮಾರ್ಗವನ್ನು ಬಂದ್ ಮಾಡುವುದಾಗಿ ಚೀನಾ ಬೆದರಿಕೆಯೊಡ್ದಿದೆ. ಈ ಬಗ್ಗೆ ಭಾರತಕ್ಕೆ ರಾಜತಾಂತ್ರಿಕ ಪ್ರತಿಭಟನೆ ವ್ಯಕ್ತಪಡಿಸಿರುವುದಾಗಿ ಹೇಳಿದೆ. 

ಸಿಕ್ಕಿಂ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಅತಿಕ್ರಮಣ ಪ್ರವೇಶ ಮಾಡಿರುವುದಾಗಿ ಚೀನಾ ಆರೋಪಿಸಿದೆ. ಆದರೆ ಚೀನಾದ ಯೋಧರೆ ಸಿಕ್ಕಿಂ ಗಡಿ ಪ್ರವೇಶಿಸಿರುವುದಾಗಿ ಭಾರತ ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next