Advertisement

ಪಾಕಿಸ್ಥಾನ‌ಕ್ಕೆ ಯುದ್ಧ ಹಡಗು ನೀಡಿದ ಚೀನ

12:13 AM Nov 10, 2021 | Team Udayavani |

ಬೀಜಿಂಗ್‌: ಹಿಂದೂ ಮಹಾಸಾಗರದಲ್ಲಿ ಹಾಗೂ ಅರಬಿ ಸಮುದ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಶತಾಯಗತಾಯ ಹವಣಿಸು ತ್ತಿರುವ ಚೀನ, ಇದಕ್ಕೆ ಪೂರಕವಾಗಿ ತಾನು ತಯಾರಿಸಿರುವ ಅತ್ಯಾಧುನಿಕ ಯುದ್ಧ ಹಡಗುಗಳನ್ನು ಪಾಕಿಸ್ಥಾನ‌ಕ್ಕೆ ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಎಲ್ಲ ಹಡಗುಗಳನ್ನು “ಚೀನ ಸ್ಟೇಟ್‌ ಶಿಪ್‌ಬಿಲ್ಡಿಂಗ್‌ ಕಾರ್ಪೊರೇಶನ್‌’ (ಸಿಎಸ್‌ಎಸ್‌ಸಿ) ಸಂಸ್ಥೆ ನಿರ್ಮಿಸಿದೆ. ಶಾಂಘೈನಲ್ಲಿ ಇತ್ತೀಚೆಗೆ ನಡೆದಿದ್ದ ಸರಳ ಸಮಾರಂಭವೊಂದರಲ್ಲಿ ಪಾಕಿಸ್ಥಾನ‌ ನೌಕಾ ಪಡೆಯ ಮುಖ್ಯಸ್ಥರಿಗೆ ಚೀನ ನೌಕಾಪಡೆಯ ಮುಖ್ಯಸ್ಥರು ಈ ಹಡಗುಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ. ಹೀಗೆ, ಹಸ್ತಾಂತರಗೊಂಡಿರುವ “ಟೈಪ್‌ 054ಎ/ಪಿ’ ಎಂಬ ಮಾದರಿಯ ಈ ಹಡಗುಗಳನ್ನು “ಪಿಎನ್‌ಎಸ್‌ ತುಘ್ರಿಲ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು “ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ಇದರ ಬೆನ್ನಲ್ಲೇ ಚೀನದಲ್ಲಿರುವ ಪಾಕಿಸ್ಥಾನ‌ ರಾಯಭಾರಿ ಮೊಯಿಲ್‌ ಉಲ್‌ ಹಕ್‌ ಅವರು ಹೇಳಿಕೆ ನೀಡಿ, ಪಿಎನ್‌ಎಸ್‌ ತುಘ್ರಿಲ್ ಯುದ್ಧ ಹಡಗುಗಳ ಹಸ್ತಾಂತರದಿಂದ ಹಿಂದೂ ಮಹಾ ಸಾಗರದಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶಗಳು ಪಾಕಿಸ್ಥಾನ‌ಕ್ಕೆ ಸಮಾನ ಅವಕಾಶ ಸಿಕ್ಕಂತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಅವರ ಈ ಮಾತುಗಳು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿವೆ.

ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್‌

ಸಮ್ಮೇಳನಕ್ಕೆ ಬರುವುದಿಲ್ಲ; ಚೀನ ಸ್ಪಷ್ಟನೆ: ಆಫ್ಘಾನಿಸ್ಥಾನ‌ದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗೆ ಕುರಿತಂತೆ ದಕ್ಷಿಣ ಏಷ್ಯಾ ರಾಷ್ಟ್ರ ಗಳು ಕೈಗೊಳ್ಳಬಹುದಾದ ರಾಜತಾಂತ್ರಿಕ ನಿರ್ಧಾರ ಗಳ ಕುರಿತಾಗಿ ಚರ್ಚಿಸಲು ಹೊಸದಿಲ್ಲಿಯಲ್ಲಿ ಭಾರತ ಏರ್ಪಡಿಸಿರುವ ಅಂತಾರಾಷ್ಟ್ರೀಯ ಸಮ್ಮೇ ಳನಕ್ಕೆ ಬರುವುದಿಲ್ಲ ಎಂದು ಚೀನ ಹೇಳಿದೆ. ವಾರದ ಹಿಂದೆ, ಈ ಸಮ್ಮೇಳನದಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ‌ ಹೇಳಿತ್ತು. ಈಗ ಚೀನ ಕೂಡ ಅದೇ ನಿರ್ಧಾರ ತಳೆದಿದೆ.

Advertisement

“ಬುಧವಾರಕ್ಕೆ ಅನೇಕ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಭೆಗೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ. ಆದರೆ ದ್ವಿಪಕ್ಷೀಯ ಮಾರ್ಗದೊಂದಿಗೆ ಭಾರತದೊಂದಿಗೆ ಮಾತುಕತೆ ಯಲ್ಲಿರುತ್ತೇವೆ’ ಎಂದು ಚೀನ ಕಾರಣ ನೀಡಿದೆ.

ದಿಲ್ಲಿಯಲ್ಲಿ ನ. 10ರಂದು ಈ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಇರಾನ್‌, ರಷ್ಯಾ, ಕಜಕಿಸ್ಥಾನ‌, ಕಿರ್ಗಿಸ್ಥಾನ‌, ತಜಿಕಿಸ್ಥಾನ‌, ತುರ್ಕ್‌ ಮೆನಿಸ್ಥಾನ‌ ಮತ್ತು ಉಜ್ಬೇಕಿಸ್ಥಾನ‌ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next