Advertisement
ಹೌದು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿಯೇ ಕೊಪ್ಪಳ ಜಿಲ್ಲೆಯ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಪಾಲಕರಲ್ಲಿನ ಅಜ್ಞಾನ, ತಿಳಿವಳಿಕೆಯ ಕೊರತೆಯಿಂದ ಅಲ್ಲಲ್ಲಿ ಮಕ್ಕಳಿಗೆ ಬಾಲ್ಯವಿವಾಹ ಮಾಡಲಾಗುತ್ತಿದೆ. ಬಾಲ್ಯದಲ್ಲೇ ತಾಯ್ತನ ಹೊಂದುವ ಬಾಲೆಯು ಶಿಶುವಿಗೆ ಜನ್ಮ ನೀಡುತ್ತಿದ್ದಾಳೆ. ಮೊದಲೇ ತಾಯಿ ಅಪ್ರಾಪೆ¤ಯಾಗಿದ್ದು, ಅವರಲ್ಲಿ ಆರೋಗ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆಯಿರುತ್ತದೆ. ತನ್ನ ನೋವಿನ ಜೊತೆಗೆ ಮಗುವಿನಲ್ಲೂ ಅಪೌಷ್ಟಿಕತೆ ಕಾಡುತ್ತಾ ಮಗುವಿನ ಜೀವನ ಬೆಳವಣಿಗೆಗೆ ಮಾರಕವಾಗುತ್ತಿದೆ. ಇದನ್ನು ನಿವಾರಿಸಲು ಕೇಂದ್ರ ಸರ್ಕಾರವು ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ (ನ್ಯೂಟ್ರೇಶನ್ ರಿಹ್ಯಾಬಿಟೇಶನ್ ಸೆಂಟರ್) (ಎನ್ಆರ್ಸಿ) ಆರಂಭ ಮಾಡಿದೆ. ಆದರೆ ಈ ಕೇಂದ್ರಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ತುಂಬ ಕಡಿಮೆಯಿರುತ್ತದೆ.
Related Articles
Advertisement
ತಾಲೂಕಾಸ್ಪತ್ರೆಯಲ್ಲಿ ಕೇಂದ್ರ ಆರಂಭಿಸಲಿ: ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಆರಂಭಿಸಿದೆ. ಆದರೆ ಉಳಿದ ತಾಲೂಕಿನ ಜನರಿಗೆ ಇದರ ಸೌಲಭ್ಯ ದೊರೆಯಲ್ಲ. ಜಿಲ್ಲಾಸ್ಪತ್ರೆಗೆ ಬರುವುದೆಂದರೆ ತುಂಬ ಹೊರೆಯಾಗಲಿದೆ. ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ಸರ್ಕಾರ ಎನ್ಆರ್ಸಿ ಕೇಂದ್ರ ಆರಂಭ ಮಾಡುವ ಜೊತೆಗೆ ಅಪೌಷ್ಟಿಕ ಮಕ್ಕಳ ಪಾಲಕರಲ್ಲಿ ಇಂತಹ ಯೋಜನೆಯ ಕುರಿತು ಜಾಗೃತಿ ಮೂಡಿಸಿದರೆ ಈ ಭಾಗದಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ತೊಲಗಲು ಸಾಧ್ಯವಿದೆ. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆಗೆ ಅಪೌಷ್ಟಿಕತೆ ಬಾಧಿಸಲಿದೆ.
ಸರ್ಕಾರ ಜಿಲ್ಲಾ ಆಸ್ಪತ್ರೆಗೆ ಒಂದೇ ಎನ್ ಆರ್ಸಿ ಕೇಂದ್ರ ಆರಂಭಿಸಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಆರಂಭಕ್ಕೆ ನಾವು ಮನವಿ ಮಾಡಿದ್ದೇವೆ. ಇನ್ನೂ ಅಪೌಷ್ಟಿಕ ಮಕ್ಕಳನ್ನು ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಪಡೆಯಿರಿ ಎಂದು ಪಾಲಕರಿಗೆ ಹೇಳಲಾಗುತ್ತದೆ. ಆದರೆ ಪಾಲಕರು 14 ದಿನಗಳ ಕಾಲ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿಲ್ಲ.ಡಾ| ಅಲಕನಂದ ಮಳಗಿ
ಆರ್ಸಿಎಚ್ ಅಧಿಕಾರಿ, ಕೊಪ್ಪಳ. ದತ್ತು ಕಮ್ಮಾರ