Advertisement

ಮಕ್ಕಳ ಕೂಟ ಸಮಾರೋಪ

04:43 PM May 12, 2018 | Team Udayavani |

ಅಖೀಲ ಕರ್ನಾಟಕ ಮಕ್ಕಳ ಕೂಟ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏರ್ಪಾಡಾಗಿದೆ. ಈ ಪ್ರಯುಕ್ತ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಕೂಟದ ಅಧ್ಯಕ್ಷರಾದ ಟಿ.ವಿ. ಮಾರುತಿ ಅವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್‌ ಸಭಾಪತಿಗಳಾದ ವಿ.ಆರ್‌. ಸುದರ್ಶನ್‌, ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್‌ ಮತ್ತು ಸಾಮಾಜಿಕ ಕಾರ್ಯಕರ್ತರಾದ ಹರೀಶ್‌ ಜೆ. ಪದ್ಮನಾಭ ಅವರು ಭಾಗವಹಿಸುತ್ತಿದ್ದರು.

Advertisement

ಎಲ್ಲಿ?: ಶ್ರೀಮತಿ ಆರ್‌. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ
ಯಾವಾಗ?: ಮೇ 13- 14, ಸಂಜೆ 4

Advertisement

Udayavani is now on Telegram. Click here to join our channel and stay updated with the latest news.

Next