Advertisement

ಅನ್ನದ ಬಿಸಿ ಗಂಜಿ ಬಿದ್ದು ಐವರು ಮಕ್ಕಳು, ಅಡುಗೆ ಸಹಾಯಕಿಗೆ ಗಾಯ

02:53 PM Jun 21, 2022 | Team Udayavani |

ರಾಯಚೂರು: ನಗರದ 13ನೇ ವಾರ್ಡ್ ನ ಮಂಗಳವಾರಪೇಟೆ ಅಂಗನವಾಡಿಯಲ್ಲಿ ಬಿಸಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಹಾಗೂ ಅಡುಗೆ ಸಹಾಯಕಿ ಗಾಯಗೊಂಡ ಘಟನೆ ನಡೆದಿದೆ.

Advertisement

ಹಿಬಾ (3 ವ), ಅರ್ಹಾನ್ (3 ವ), ಮಹ್ಮದ್ ಜಾಹಿದ್ (3 ವ), ಶೇಖ್ ಅದ್ನಾನ್ (4 ವ) ಹಾಗೂ ಬಿಬಿ ಮರಿಯಮ್ (3 ವ) ಗಾಯಗೊಂಡ ಮಕ್ಕಳು.

ಬೆಳಗ್ಗೆ ಅಂಗನವಾಡಿಯಲ್ಲಿ ಅನ್ನ ಮಾಡಿದ್ದ ಅಡುಗೆ ಸಹಾಯಕಿ ಲಕ್ಷ್ಮಿ ಗಂಜಿ ಬಸಿಯುವಾಗ ಮಕ್ಕಳು ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂಓದಿ:ಸಾರ್ವಜನಿಕರೆದುರೇ ಬಸ್ ಏಜೆಂಟ್ ನ ಬರ್ಬರ ಕೊಲೆ: ಅನೈತಿಕ ಸಂಬಂಧ ಕಾರಣ ಶಂಕೆ

ಅಂಗನವಾಡಿ ಸ್ಥಳ ಚಿಕ್ಕದಾಗಿರುವ ಕಾರಣ ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಮಕ್ಕಳು ಆಡುತ್ತಿದ್ದರು. ಗಂಜಿ ಸಾಕಷ್ಟು ಬಿಸಿಯಾಗಿದ್ದ ಕಾರಣ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಾಯಕಿ ಲಕ್ಷ್ಮಿ ಕೈ ಮೇಲೆ ಗಂಜಿ ಬಿದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next