Advertisement

ಸುಳ್ಯ: ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

11:14 AM Jul 15, 2021 | Team Udayavani |

ಸುಳ್ಯ:  ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸಿ.ಡಿ.ಪಿ.ಒ. ರಶ್ಮಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ತಂಡ  ಮದುವೆಯನ್ನು ತಡೆದ ಘಟನೆ ಕಂದಡ್ಕ ಎಂಬಲ್ಲಿ ನಡೆದಿದೆ.

Advertisement

ತಮಿಳು ಕಾಲನಿಯಲ್ಲಿನ ಪ್ರತಾಪ ಎಂಬವನಿಗೆ (26)  ಜು.15 ರಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದು ಎಂದು ನಿಶ್ಚಯಿಸಲಾಗಿತ್ತು.  ಹುಡುಗಿಗೆ 18 ವರ್ಷ ಆಗಿಲ್ಲ ಎಂಬ ಮಾಹಿತಿ ಬಂದ ಹಿನ್ನೆಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪೂರಕ ಮಾಹಿತಿ ಕೇಳಿದೆ. ಈ ಸಂದರ್ಭ ಹುಡುಗಿಯ ಕುಟುಂಬ ದಾಖಲೆ ನೀಡಲು ತಡವರಿಸಿ 18 ವರ್ಷವಾಗಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಹುಡುಗಿಗೆ 18 ವರ್ಷ ತುಂಬಿದ ಬಳಿಕ ಇದೇ ಹುಡುಗನಿಗೆ ಮದುವೆ ಮಾಡಿಕೊಡಬಹುದು ಎಂದು ಮುಚ್ಚಳಿಕೆ ಬರೆದು ಅಪ್ರಾಪ್ತೆಯನ್ನು ಕುಟುಂಬ ಸಮೇತ ಮೈಸೂರಿಗೆ ಕಳುಹಿಸಲಾಗಿದೆ ಎಂದು ಸಿ.ಡಿ.ಪಿ.ಒ ರಶ್ಮಿ ನೆಕ್ರಾಜೆ ಉದಯವಾಣಿಗೆ ತಿಳಿಸಿದ್ದಾರೆ.

ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next