Advertisement

ಚಿಕ್ಕಮಗಳೂರು: ಈರುಳ್ಳಿ ಬೆಳೆ ಸಮಸ್ಯೆ; ಮನನೊಂದ ರೈತ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ

10:46 AM Sep 23, 2022 | Team Udayavani |

ಚಿಕ್ಕಮಗಳೂರು: ರೈತನೊಬ್ಬ ತಾನೇ ಬೆಳೆದ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.

Advertisement

5 ಎಕರೆ ಪ್ರದೇಶದಲ್ಲಿ ಸುಮಾರು 3-4 ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದ ರೈತ ಮಂಜುನಾಥ್, ಬಳಿಕ ಭೀಕರ ಮಳೆಯಿಂದ ಈರುಳ್ಳಿ ಕೃಷಿ ಸಂಪೂರ್ಣ ನಾಶವಾಗಿತ್ತು.

ಈರುಳ್ಳಿ ಗಾತ್ರ ಬೆಳ್ಳುಳ್ಳಿಯಂತಿದೆ, ಈರುಳ್ಳಿ ಕಿತ್ತರೆ ಕೂಲಿಗೂ ಆಗೋದಿಲ್ಲ. ಹಣ ಬೇಡ ಕಿತ್ಕೊಂಡ್ ಹೋಗಿ, ಈರುಳ್ಳಿ ಕೀಳಲು ಯಾರೂ ಇಲ್ಲ ಎಂಬೆಲ್ಲ ಸಮಸ್ಯೆಗಳ ಬಗ್ಗೆ ಮನನೊಂದು ರೈತ ಈ ರೀತಿಯಾಗಿ ವರ್ತಿಸಿದ್ದಾನೆ ಎನ್ನುತ್ತಾರೆ ಸ್ಥಳಿಯರು.

Advertisement

Udayavani is now on Telegram. Click here to join our channel and stay updated with the latest news.

Next