Advertisement

ಶೃಂಗೇರಿ: ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ

10:02 AM Jan 19, 2020 | keerthan |

ಚಿಕ್ಕಮಗಳೂರು: ಶೃಂಗೇರಿ ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗಿಬ್ಬರಿಗೆ ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿ ಆದೇಶ ಮಾಡಿದೆ.

Advertisement

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಸಂತೋಷ್ ಹಾಗೂ ಪ್ರದೀಪ್ ಮೇಲಿನ ಆರೋಪ ಸಾಬೀತಾಗಿದ್ದು ಗಲ್ಲು ಶಿಕ್ಷೆ ಜೊತೆಗೆ ತಲಾ 25 ಸಾವಿರ ದಂಡ ವಿಧಿಸಲಾಗಿದೆ.

2016ರ ಫೆಬ್ರವರಿ 16ರಂದು ಶೃಂಗೇರಿ ತಾಲೂಕಿನ ಅಕ್ಕಸಾಲುಕೊಡಿಗೆಯ 18ರ ಹರೆಯದ ಕಾಲೇಜು ಹುಡುಗಿಯ ಮೇಲೆ ಇವರಿಬ್ಬರು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಆಕೆ ಪರೀಕ್ಷೆ ಬರೆದು ಮನೆಗೆ ಕಾಲು ದಾರಿಯಲ್ಲಿ ವಾಪಾಸು ಆಗುತ್ತಿದ್ದ ಸಮಯದಲ್ಲಿ ಕಾದು ಕುಳಿತಿದ್ದ ಪ್ರದೀಪ್ ಮತ್ತು ಸಂತೋಷ್ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದು ಬಲತ್ಕಾರ ನಡೆಸಿ ನಂತರ ಕೊಲೆಗೈದಿದ್ದರು.

ಆಕೆಯ ಕಿವಿ ಮತ್ತು ಮೂಗಿನ ನತ್ತನ್ನು ಆಕೆಯ ಶವವನ್ನು ಅಲ್ಲೆ ಹತ್ತಿರದ ಪಾಳು ಬಾವಿಗೆ ಎಸೆದಿದ್ದರು. ನಂತರ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು.

ಮೃತಪಟ್ಟ ಹುಡುಗಿಯ ತಂದೆಯ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದರು. ನಾಲ್ಕು ವರ್ಷಗಳಿಂದ ವಿಚಾರಣೆ ನಡೆದಿದ್ದು, ಇಂದು (ಶನಿವಾರ) ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ ನೀಡಿ ತೀರ್ಪು ಪ್ರಕಟಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next