Advertisement

ಚಿಕ್ಕಮಗಳೂರು: ಕೊಟ್ಟಗೆಹಾರ – ಬಾಳೆಹೊಳೆ ರಸ್ತೆ ಸಂಪರ್ಕ ಕಡಿತ

09:08 AM Aug 17, 2019 | Suhan S |

ಚಿಕ್ಕ ಮಗಳೂರು: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ನಿರಂತರವಾಗಿ ಸುರುಯುತ್ತಿದ್ದ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಿದೆ.ಆದರೆ ಮಳೆ ತಂದ ಅವಾಂತರದಿಂದ ಜನಸಾಮಾನ್ಯರ ಗೋಳಿಗೆ ಮಾತ್ರ ಕೊನೆಯಿಲ್ಲ ಎಂಬಂತೆ ಮಲೆನಾಡಿನ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪ ರಸ್ತೆ ಕುಸಿದಿದ್ದು ಇದರಿಂದಾಗಿ ಕೊಟ್ಟಗೆಹಾರ – ಬಾಳೆಹೊಳೆ ಹಾಗೂ ಕಳಸ -ಹಿರೇಬೈಲು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಜನಸಾಮಾನ್ಯರ ಪರಿಸ್ಥಿತಿಯನ್ನು ಮನಗಂಡ ಜಿಲ್ಲಾಡಳಿತ ತಕ್ಷಣ ತಾತ್ಕಾಲಿಕ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದು,ಜನರ ಅನುಕೂಲಕ್ಕಾಗಿ ತೆರವು ಕಾರ್ಯಚರಣೆಯನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next