Advertisement

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

08:59 PM Oct 22, 2024 | Team Udayavani |

ಚಿಕ್ಕಮಗಳೂರು: ಮನೆ ಮಾರಾಟ ಮಾಡಿದ್ದರೂ ಮನೆ ಖಾಲಿ ಮಾಡಿಲ್ಲವೆಂಬ ಕಾರಣಕ್ಕೆ ಬಾವನನ್ನು ಭಾಮೈದ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊ*ಲೆ ಮಾಡಿರುವ ಘಟನೆ ಸೋಮವಾರ (ಅ.22) ನಗರದ ತಮಿಳು ಕಾಲೋನಿ ಬಡಾವಣೆಯಲ್ಲಿ ನಡೆದಿದೆ.

Advertisement

ಗೋಪಾಲ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ 25 ಸಾವಿರ ರೂ.ಗೆ ತನ್ನ ಭಾವ ಮಂಜು ಅವರಿಗೆ ಮನೆ ಮಾರಾಟ ಮಾಡಿದ್ದನು. ಮನೆ ಮಾರಾಟ ಮಾಡಿದ್ದರು. ಮೂರು ವರ್ಷಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದನು. ಮನೆ ಕಾಲಿ ಮಾಡುವ ವಿಚಾರಕ್ಕೆ ಗೋಪಾಲ ಹಾಗೂ ಮಂಜು ನಡುವೆ ಈ ಹಿಂದೆ ಅನೇಕ ಬಾರೀ ಗಲಾಟೆ ನಡೆದಿತ್ತು.

ಸೋಮವಾರ ಗಲಾಟೆ ತಾರಕ್ಕಕೇರಿ ಗೋಪಾಲನೂ ಮಂಜು ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಮಂಜು ತಲೆಗೆ ತೀವ್ರ ಪೆಟ್ಟಾಗಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮೃತಪಟ್ಟಿದ್ದಾನೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗೋಪಾಲ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next