Advertisement

ಕೋವಿಡ್ ಜಾಗೃತಿ ಕಾರ್ಯಕ್ರಮ

05:22 PM Apr 16, 2020 | Naveen |

ಸೊರಬ: ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಜಡೆಯ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲೂಕು ಆಡಳಿತಕ್ಕ ನೀಡಿದ 5 ಸಾವಿರ ರೂ. ಹಾಗೂ ಸೋಪು, ಸ್ಯಾನಿಟೈಸರ್‌
ಗಳನ್ನು ಜಡೆ ಸಂಸ್ಥಾನ ಮಠದ ಡಾ|ಮಹಾಂತ ಸ್ವಾಮೀಜಿ ಅವರು ತಹಶೀಲ್ದಾರ್‌ ಪಟ್ಟರಾಜಗೌಡ ಅವರಿಗೆ ನೀಡಿದರು. ದಂತ ವೈದ್ಯ ಡಾ| ಎಚ್‌.ಇ. ಜ್ಞಾನೇಶ್‌, ವಕೀಲ ನಾಗಪ್ಪ ಮಾತನಾಡಿದರು. ನಾಗರಾಜ್‌ ಗುತ್ತಿ, ವಕೀಲ ಇಂಧುದರ್‌ ಒಡೆಯರ್‌, ಪ.ಪಂ ಸದಸ್ಯ ಮಧುರಾಯ್‌ ಜಿ.ಶೇಟ್‌, ನಟರಾಜ್‌, ಪುಟ್ಟಯ್ಯ, ಮಹ್ಮದ್‌ ಶಾಬುಲಾಲ್‌ ಇತರರಿದ್ದರು. ಕಲಾವಿದ ಶಿವರುದ್ರಪ್ಪ ಜೋಗಿ ಕೊರೊನಾ ಜಾಗೃತಿ ಗೀತೆ ಹಾಡಿದರೆ ಸಾಮಾಜಿಕ ಕಾರ್ಯಕರ್ತ ಎಚ್‌.ಬಿ. ಶಾಂತವೀರಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next