Advertisement

Chikkamagaluru: ಕ್ಕೆಕೊಸಳ್ಳಿ ಜಲಪಾತದಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

08:06 PM Apr 08, 2023 | Team Udayavani |

ಬೈಂದೂರು: ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್‌ನಲ್ಲಿ ಸಂಜೆ ಈಜುವ ಸಂದರ್ಭ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಚಿರಾಂತ್‌ ಶೆಟ್ಟಿ (20) ಮೃತದೇಹ ಶನಿವಾರ ಪತ್ತೆಯಾಗಿದೆ.ಮೃತ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್‌.ಐ ಕುಮಾರ ಶೆಟ್ಟಿ ಎಂಬುವವರ ಮಗ ಎಂದು ತಿಳಿದುಬಂದಿದೆ.ಈತ ಮಂಗಳೂರಿನ ಶ್ರಿದೇವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಕಾಂ ಜೊತೆಗೆ ಏನಿಯೇಷನ್‌ ಕೋರ್ಸ್‌ ಕಲಿಯುತ್ತಿದ್ದ ಎನ್ನಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ,ಮುಳುಗು ತಜ್ಞರು ಹಾಗೂ ಆರಕ್ಷಕ ಸಿಬಂದಿಗಳು ಆಗಮಿಸಿದ್ದು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next