Advertisement

Chikkamagaluru: ದಶಕಗಳ ಬಳಿಕ ವಿವಾದಿತ ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ

01:14 PM Nov 27, 2023 | Team Udayavani |

ಚಿಕ್ಕಮಗಳೂರು: ದಶಕಗಳ ಬಳಿಕ ವಿವಾದಿತ ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ ನಡೆಯಲಿದೆ.

Advertisement

ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರುವ ದತ್ತಪೀಠದಲ್ಲಿ ವರ್ಷಗಳ ಬಳಿಕ ಮೊದಲ ಬಾರಿಗೆ ನೂರಾರು ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆಯಲ್ಲಿ ಭಾಗಿಯಾಗಿ, ದತ್ತ ಪಾದುಕೆ ದರ್ಶನ ಮಾಡಿ, ಪೂಜೆ ಸಲ್ಲಿಸಲಿರುವರು.

ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಪೀಠದಲ್ಲಿ ಪ್ರತಿ ಹುಣ್ಣಿಮೆಯಂದು ಭಜರಂಗದಳ, ವಿಶ್ವ ಹಿಂದೂ ಪರಿಷತ್ ನಿಂದ ಪೂಜೆ ನಡೆಯುತ್ತಿತ್ತು.

ಹಿಂದೂ ಪೀಠದ ಜೊತೆ ರಾಜಕೀಯವಾಗಿ ಚರ್ಚೆಯಲ್ಲಿರುವ ದತ್ತಪೀಠಕ್ಕೆ ಬೈಕ್ ಜಾಥಾ ಮೂಲಕ ಕಾರ್ಯಕರ್ತರು ತೆರಳಿ ಪೂಜೆ ಮಾಡಲಿದ್ದು, ಡಿಸೆಂಬರ್ 17 ರಿಂದ ದತ್ತ ಜಯಂತಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next