Advertisement

Chikkamagaluru; ಬೈಕನ್ನು ಎಳೆದುಕೊಂಡು ಹೋದ ಕಾರು: ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

11:31 AM Aug 15, 2023 | Team Udayavani |

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ ನಡೆದಿದ್ದು, ಅಡಿಗೆ ಬಿದ್ದ ಬೈಕನ್ನು ಕಾರು ಎಳೆದುಕೊಂಡು ಹೋದ ಘಟನೆ ನಡೆದಿದೆ.

Advertisement

ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಾರು ಸುಮಾರು 100 ಅಡಿಯಷ್ಟು ದೂರ ಎಳೆದೊಯ್ದಿದೆ. ಗುದ್ದಿದ ರಭಸಕ್ಕೆ ಬೈಕಿನಲ್ಲಿ ಬೆಂಕಿ ಹತ್ತಿದರೂ ಕಾರು ಚಾಲಕ ನಿಲ್ಲಿಸದೆ ಹೋಗಿದ್ದಾನೆ. ಬೈಕ್ ಸವಾರನನ್ನು ಕೆಳಕ್ಕೆ ತಳ್ಳಿ ಕಾರು ಚಾಲಕ ತನ್ನ ಪಾಡಿಗೆ ತೆರಳಿದ್ದಾರೆ.

ಇದನ್ನೂ ಓದಿ:ಬ್ರಿಟಿಷರ ವಿರುದ್ಧ ಚಳವಳಿ; ಕರಾವಳಿಯ ಮೊದಲ ದಂಪತಿ; ತಾಯಿ ಮಡಿಲಿಗೆ ಮಗುವನ್ನೊಪ್ಪಿಸಿ ಜೈಲಿಗೆ!

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿರುವ ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಬದಿ ನಿಂತಿದ್ದ ಜನರ ಕಣ್ಣೆದುರೇ ಅವಘಡ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next