Advertisement

Chikkamagaluru; ಗಾಂಜಾ, ಕುಡಿತದ ಅಮಲಿನಲ್ಲಿ ಹೈಡ್ರಾಮಾ ನಡೆಸಿದ ರೌಡಿಶೀಟರ್‌ ಬಂಧನ

05:22 PM Aug 06, 2024 | Team Udayavani |

ಚಿಕ್ಕಮಗಳೂರು: ಗಾಂಜಾ ಹಾಗೂ ಕುಡಿದ ಅಮಲಿನಲ್ಲಿ ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿಯಲು ಮುಂದಾದ ರೌಡಿ ಶೀಟರ್ ನನ್ನು ಪೊಲೀಸರು ಮಂಗಳವಾರ (ಆ.06) ಬಂಧಿಸಿದ್ದಾರೆ.

Advertisement

ನಗರದ ಬೇಲೂರು ರಸ್ತೆಯಲ್ಲಿ ರೌಡಿ ಶೀಟರ್ ಕಿರಿಕ್ ಕೌಶಿಕ್ ಎಂಬಾತ ಗಾಂಜಾ ಹಾಗು ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕು ಇರಿಯಲು ಮುಂದಾಗಿದ್ದಾನೆ. ಈತನ ವರ್ತನೆಯಿಂದ ಗಾಬರಿಗೊಂಡ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಚಾಕು ಇರಿಯಲು ಮುಂದಾಗಿದ್ದಾನೆ.

ಹರಸಾಹಸ ಪಟ್ಟು ಪೊಲೀಸರು ಈತನನ್ನು ಬಂಧಿಸಿದ್ದು ಪೊಲೀಸ್ ವಾಹನದಲ್ಲಿ ಕರೆದೊಯ್ಯುವ ವೇಳೆ ತಪ್ಪಿಸಿ ಕೊಳ್ಳಲು ಮುಂದಾಗಿದ್ದಾನೆ.

ಈತನ ವರ್ತನೆಯಿಂದ ರಾಷ್ಟೀಯ ಹೆದ್ದಾರಿ ಮತ್ತು ಬೈಪಾಸ್ ರಸ್ತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next