Advertisement

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಪ್ರತಿಭಟನೆ

05:37 PM Feb 06, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ  ಅತ್ಯಾಚಾರ ಪ್ರಕರಣದ ಆರೋಪಿಗಳನ್ನು
ತಕ್ಷಣ ಬಂಧಿ ಸಬೇಕೆಂದು ಒತ್ತಾಯಿಸಿ   ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಶುಕ್ರವಾರ ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು “ಅತ್ಯಾಚಾರ ತಡೆಗಟ್ಟಿ ಮಹಿಳೆಯರ ಜೀವ ಉಳಿಸಿ ಕರ್ನಾಟಕ ಉತ್ತರ ಭಾರತವಾಗುವುದನ್ನು ತಡೆಯಿರಿ’ ಎಂದು ಘೋಷಣೆಗಳನ್ನು ಕೂಗಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌. ಎಚ್‌. ದೇವರಾಜ್‌ ಮಾತನಾಡಿ, ಜಿಲ್ಲೆಯಲ್ಲಿ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದರೂ ಬಿಜೆಪಿ, ಭಜರಂಗ ದಳ, ಸಂಘ ಪರಿವಾರ ಮುಖಂಡರು. ಜಿಲ್ಲೆಯ ಜನಪ್ರತಿನಿಧಿ ಗಳು, ಸಂಸದರು ಈ ಪ್ರಕರಣದ ಬಗ್ಗೆ ಮೌನ
ತಾಳಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಶೃಂಗೇರಿ ಅತ್ಯಾಚಾರ ಪ್ರಕರಣದ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ತಕ್ಷಣ ಅವರನ್ನು ಬಂ ಧಿಸಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ರಾಜ್ಯ ಕಾರ್ಯದರ್ಶಿ ಅತಾವುಲ್ಲಾ ಮಾತನಾಡಿ, ಶೃಂಗೇರಿ ಅತ್ಯಾಚಾರ
ಪ್ರಕರಣದಲ್ಲಿ ಕೆಲವರನ್ನು ಮಾತ್ರ ಬಂಧಿ  ಸಿದ್ದು, ಪ್ರಭಾವಿಗಳನ್ನು ಉಳಿಸಲಾಗಿದೆ. ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ಶೃಂಗೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಮಾಜಿ  ಅಧ್ಯಕ್ಷ ಚಿದಂಬರ್‌, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ಜಿಲ್ಲಾಧ್ಯಕ್ಷ ಸೌದ್‌
ಆಲಂ, ಕಾರ್ಯದರ್ಶಿ ರಸೂಲ್‌, ಉಪಾಧ್ಯಕ್ಷ ಇಕ್ಲಾಸ್‌, ಲಿಮ್ರಾನ್‌ ಇದ್ದರು.

Advertisement

ಓದಿ : ಬಿಜೆಪಿ ಆಡಳಿತದಲ್ಲಿಲ್ಲ ಮಹಿಳೆಗೆ ರಕ್ಷಣೆ: ಕೈ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next