Advertisement

ಸಿ.ಟಿ. ರವಿ ಜೋಧ್‌ ಪುರ ಪ್ರವಾಸ

06:17 PM Jul 20, 2021 | Team Udayavani |

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸೋಮವಾರ ರಾಜಸ್ಥಾನದ ಜೋಧ್‌ಪುರಕ್ಕೆ ಪ್ರವಾಸ ಕೈಗೊಂಡಿದ್ದು, ಜೋಧ್‌ಪುರ್‌ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಸಿ.ಟಿ. ರವಿ ಅವರನ್ನು ಸ್ವಾಗತಿಸಿದರು.

Advertisement

ರಾಜಸ್ಥಾನದ ರತನಾಡಾ ಮಂಡಲ ಪಕ್ಷದ ಕಾರ್ಯಕಾರಿಣಿ ಸಭೆ ಹಾಗೂ ಜೋಧ್‌ಪುರ ಗ್ರಾಮೀಣ ದಕ್ಷಿಣ ಜಿಲ್ಲೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಟಿ. ರವಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ರಾಜಸ್ಥಾನ ರಾಜ್ಯ ಪ್ರಧಾನ ಕಾರ್ಯದರ್ಶಿ ಭಜನ್‌ಲಾಲ್‌ ಶರ್ಮ, ಜೋಧ್‌ಪುರ ಜಿಲ್ಲಾ ಪ್ರಭಾರಿ ಹಾಗೂ ಅಜ್ಮಿàರ್‌ ಶಾಸಕ ವಾಸುದೇವ ದೇವನಾನಿ, ಜೋಧ್‌ಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವೆಂದ್ರ ಜೋಷಿ, ಜೋಧ್‌ಪುರ ಗ್ರಾಮೀಣ ದಕ್ಷಿಣ ಜಿಲ್ಲೆಯ ಜಿಲ್ಲಾಧ್ಯಕ್ಷ ಜಯರಾಂ ಬಿಸ್ನೋಯಿ, ರತನಾಡಾ ಮಂಡಲದ ಅಧ್ಯಕ್ಷ ಮಾದೋ ಸಿಂಗ್‌ ಜೀ ಪರಿಹಾರ್‌ ಭಾಗವಹಿಸಿದ್ದರು ಎಂದು ಸಿ.ಟಿ.ರವಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next