Advertisement

ವೈದ್ಯರ ರಕ್ಷಣೆಗೆ ಕಾನೂನು ರೂಪಿಸಿ

09:21 PM Jul 02, 2021 | Team Udayavani |

ಚಿಕ್ಕಮಗಳೂರು: ವೈದ್ಯರ ರಕ್ಷಣೆಗೆ ಸೂಕ್ತ ಕಾನೂನು ಅಗತ್ಯವಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನುಗಳನ್ನು ರೂಪಿಸಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಎಐಸಿಸಿ ರಾಜ್ಯ ಕಾರ್ಯದರ್ಶಿ ಬಿ.ಎಂ. ಸಂದೀಪ್‌ ಹೇಳಿದರು.

Advertisement

ಗುರುವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದಿಂದ ವೈದ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು. ಕೊರೊನಾ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಕುಟುಂಬ ಮತ್ತು ಜೀವವನ್ನು ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಅವರ ನಿರಂತರ ಪರಿಶ್ರಮದಿಂದ ಇಂದು ಸೋಂಕು ನಿಯಂತ್ರಣದಲ್ಲಿದೆ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್‌. ಮೂರ್ತಿ ಮಾತನಾಡಿ, ಕೊರೊನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಪರಿಶ್ರಮ ದೊಡ್ಡದು. ಅವರ ಮಹತ್ವ ಇಂತಹ ಸಂಕಷ್ಟದಲ್ಲಿ ನಮ್ಮೆಲ್ಲರಿಗೂ ಅರಿವಾಗಿದೆ. ಕೆಲವು ಕಿಡಿಗೇಡಿಗಳು ವೈದ್ಯರ ಮೇಲೆ ಹಲ್ಲೆ ಮಾಡುವ ಮೂಲಕ ಅವರನ್ನು ನಿಂದಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಯಾಜ್‌ ಅಹಮದ್‌ ಮಾತನಾಡಿ, ಕೊರೊನಾ ಸೋಂಕು ಭಾರತ ಒಳಗೊಂಡಂತೆ ಅನೇಕ ದೇಶಗಳಲ್ಲಿ ಸಾವು- ನೋವು ಉಂಟು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದ ವೈದ್ಯರ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘ ನೀಯ ಎಂದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಮೋಹನ್‌ಕುಮಾರ್‌ ಮಾತನಾಡಿ, ಕೋವಿಡ್‌ ಸಂಕಷ್ಟದ ಸಮಯದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಪಕ್ಷಗಳ ಮುಖಂಡರು, ದಾನಿಗಳು ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರಿಕರ, ಔಷ ಧಗಳನ್ನು ನೀಡುವ ಮೂಲಕ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿ ದ್ದಾರೆ ಎಂದರು.

ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ರಸೂಲ್‌ಖಾನ್‌, ಜಿಲ್ಲಾ ವೈದ್ಯ ಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕಿ ಡಾ| ಮೀರಾ, ವೈದ್ಯಾ  ಧಿಕಾರಿಗಳಾದ ಚಂದ್ರಶೇಖರ್‌, ನಾಗರಾಜ್‌, ಮೊಹಮದ್‌ ಸಾಲಿಯಾನ, ಕಲ್ಪನಾ, ನಾಗೇಂದ್ರ, ಕಾಂಗ್ರೆಸ್‌ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಆದಿತ್ಯ, ಕಿಸಾನ್‌ ಸೆಲ್‌ ಜಿಲ್ಲಾಧ್ಯಕ್ಷ ಎ.ಕೆ. ಪ್ರಕಾಶ್‌, ಮುಖಂಡ ಮಲ್ಲೇಶಸ್ವಾಮಿ, ವಿನಾಯಕ್‌, ರಾಯಿಲ್‌ ಷರೀಫ್‌, ಜಾವಿದ್‌, ಸಿಹಾನ್‌, ಷರೀಫ್‌, ಷಾಹಬಾಜ್‌ ಆಲಂ, ಮಧು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next