Advertisement

ಲಕ್ಯಾ ಹೋಬಳಿ ಕೆರೆ ತುಂಬಿಸುವ ಯೋಜನೆಗೆ ಟೆಂಡರ್‌

10:32 PM Jun 11, 2021 | Team Udayavani |

ಚಿಕ್ಕಮಗಳೂರು: ರಣಘಟ್ಟ ಪಿಕಪ್‌ನಿಂದ ಲಕ್ಯಾ ಹೋಬಳಿ ಕೆರೆ ತುಂಬಿಸುವ ಯೋಜನೆಗೆ ಟೆಂಡರ್‌ ಕರೆಯಲಾಗಿದೆ ಎಂದು ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ.

Advertisement

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಸನ ಜಿಲ್ಲೆಯ ಬೇಲೂರು ತಾಲೂಕು ಯಗಚಿನದಿಯ ರಣಘಟ್ಟ ಪಿಕಪ್‌ ನಿಂದ ಬೇಲೂರು ತಾಲೂಕಿನ ಮಾದಿಹಳ್ಳಿ ಮತ್ತು ಹಳೇಬೀಡು ಹೋಬಳಿಯ 7 ಕೆರೆಗಳು ಮತ್ತು ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿ ಬೆಳವಾಡಿ ಕೆರೆಗೆ ಗುರುತ್ವ ನಾಲೆಯ ಮೂಲಕ ನೀರು ತುಂಬಿಸುವ ಯೋಜನೆಗೆ ಕಾವೇರಿ ನೀರಾವರಿ ನಿಗಮದ ಯಗಚಿ ಯೋಜನಾ ವಿಭಾಗದಿಂದ ಟೆಂಡರ್‌ ಕರೆಯಲಾಗಿದೆ ಎಂದು ಹೇಳಿದ್ದಾರೆ.

ರಣಘಟ್ಟ ನೀರಾವರಿ ಯೋಜನೆ 125.46 ಕೋಟಿ ರೂ. ವೆಚ್ಚದಲ್ಲಿ 8 ಕೆರೆಗಳನ್ನು ಮತ್ತು ಯಗಚಿ ನದಿಯಲ್ಲಿ ಹೆಚ್ಚುವರಿ ನೀರು ಲಭ್ಯವಿರುವ ಸಂದರ್ಭದಲ್ಲಿ ನಂತರದ ಕೆರೆಗಳಿಗೂ ಸಹ ನೀರು ತುಂಬಿಸುವ ಯೋಜನೆಯಾಗಿದ್ದು, ರಣಘಟ್ಟ ಪಿಕಪ್‌ನಿಂದ 2.40 ಕಿ.ಮೀ. ಉದ್ದದ ತೆರೆದ ಕಾಲುವೆ, 4.20 ಕಿ.ಮೀ. ಉದ್ದದ ಸುರಂಗ ನಾಲೆ ಮತ್ತು 1.70 ಕಿ.ಮೀ. ನಿರ್ಗಮನ ತೆರೆದ ನಾಲೆ ಸೇರಿದಂತೆ 8.30 ಕಿ.ಮೀ. ಉದ್ದದ ಗುರುತ್ವ ನಾಲೆಯ ಮೂಲಕ 100 ಕ್ಯೂಸೆಕ್ಸ್‌ ನೀರಿನ ಹರಿವಿನೊಂದಿಗೆ ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next