Advertisement

ಜಿಲ್ಲಾಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಹಸ್ತಾಂತರ

10:04 PM Jun 01, 2021 | Team Udayavani |

ಚಿಕ್ಕಮಗಳೂರು : ಲೈಫ್‌ಲೈನ್‌ ಫೀಡ್‌ ಸಂಸ್ಥೆ ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ 75 ಸಾವಿರ ಮೌಲ್ಯದ 8 ಆಮ್ಲಜನಕ ಸಾಂದ್ರಕಗಳನ್ನು ಶಾಸಕ ಸಿ.ಟಿ. ರವಿ ಅವರ ಮೂಲಕ ಸೋಮವಾರ ಆಸ್ಪತ್ರೆಗೆ ಹಸ್ತಾಂತರಿಸಿದರು.

Advertisement

ನಂತರ ಶಾಸಕ ಸಿ.ಟಿ.ರವಿ ಮಾತನಾಡಿ, ಕೋವಿಡ್‌ ಕಷ್ಟದ ಪರಿಸ್ಥಿತಿಯಲ್ಲಿ ಅನೇಕ ಸಂಘ-ಸಂಸ್ಥೆಗಳು ಸ್ಪಂ ದಿಸಿ ತಮ್ಮ ಕೈಲಾದ ನೆರವು ನೀಡುವ ಮೂಲಕ ಸರ್ಕಾರದೊಟ್ಟಿಗೆ ಸಹಕರಿಸುತ್ತಿದ್ದು ಇಂತಹ ಮಾನವೀಯ ಕಾರ್ಯಗಳು ಮತ್ತಷ್ಟು ಸಂಘ-ಸಂಸ್ಥೆಗಳಿಗೆ ಪ್ರೇರಣೆಯಾಗಲಿ ಎಂದರು. ಜೀವ ಉಳಿದರೇ, ಜೀವನ ಕಟ್ಟಿಕೊಳ್ಳಬಹುದು ಪಟ್ಟಣ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದು, ಹಳ್ಳಿಗಳಲ್ಲಿ ಸೋಂಕು ನಿಯಂತ್ರಿಸಲು ಜನರ ಸಹಕಾರಬೇಕು ಎಂದ ಅವರು, ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ.

ಸರ್ಕಾರ ಜೂ.7ರ ಬಳಿಕ ಲಾಕ್‌ಡೌನ್‌ ನಿಯಮಗಳನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದರು. ಲೈಫ್‌ಲೈನ್‌ ಫೀಡ್‌ ಸಂಸ್ಥೆಯ ಮುಖ್ಯಸ್ಥ ಕಿಶೋರ್‌ಕುಮಾರ್‌ ಹೆಗ್ಡೆ ಮಾತನಾಡಿ, ಕೊರೊನಾ ತುರ್ತು ಸಂದರ್ಭದಲ್ಲಿ ಬಡವರ ಸಂಕಷ್ಟಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗೆ 75ಸಾವಿರ ಮೌಲ್ಯದ 8 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದೆ. ಅಂದಾಜು ಒಟ್ಟು 6ಲಕ್ಷ ಮೌಲ್ಯದ್ದಾಗಿದ್ದು ತುರ್ತು ಸಂದರ್ಭದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌.ಅಕ್ಷಯ್‌ ಮಾತನಾಡಿ, ಜಿಲ್ಲೆಯಲ್ಲಿ ಲೈಫ್‌ಲೈನ್‌ ಫೀಡ್‌ ಸಂಸ್ಥೆಯು ಬಡವರ ಕಷ್ಟಗಳಿಗೆ ಸ್ಪಂ ದಿಸಿ ಉತ್ತಮ ಕಾರ್ಯ ಮಾಡುತ್ತಿದ್ದು ಪೊಲೀಸ್‌ ಇಲಾಖೆ ಸ್ಟೀಮ್‌ಯಂತ್ರಗಳನ್ನು ನೀಡಿದ್ದು ಇದರಿಂದಾಗಿ ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂ ದಿಗೆ ಅನುಕೂಲವಾಗಲಿದೆ ಎಂದರು. ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಸರ್ಜನ್‌ ಡಾ| ಮೋಹನ್‌ ಸೇರಿದಂತೆ ಲೈಫ್‌ ಲೈನ್‌ ಫೀಡ್‌ನ‌ ಸಂಸ್ಥೆಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next