Advertisement

ಇಂದಿರಾ ಕ್ಯಾಂಟೀನ್‌ಗೆ ಶಾಸಕ ಬೆಳ್ಳಿಪ್ರಕಾಶ್‌ ಭೇಟಿ

09:43 PM May 14, 2021 | Team Udayavani |

ಕಡೂರು: ಶಾಸಕ ಬೆಳ್ಳಿಪ್ರಕಾಶ್‌ ಪಟ್ಟಣದ ಕೆ.ಎಲ್‌.ವಿ. ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು ಅಲ್ಲಿನ ಅಡುಗೆ ಮನೆಯನ್ನು ಪರಿಶೀಲಿಸಿ ನಂತರ ಅಲ್ಲಿ ಗ್ರಾಹಕರಿಗೆ ನೀಡಲು ಸಿದ್ಧಪಡಿಸಿದ್ದ ಟೊಮ್ಯಾಟೋ ಬಾತ್‌ ಅನ್ನು ಸ್ವತಃ ಕೇಳಿ ಪಡೆದು ರುಚಿ ನೋಡಿದರು.

Advertisement

ಸರ್ಕಾರದ ಆದೇಶದಂತೆ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರು, ನಿರ್ಗತಿಕರಿಗೆ ಉಚಿತವಾಗಿ ಉಪಾಹಾರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು. ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸುಮಾರು 900 ಜನರಿಗೆ ಉಪಾಹಾರ ನೀಡಲಾಗುತ್ತಿದೆ. ಹೆಚ್ಚು ಕಾರ್ಮಿಕರು ಇಲ್ಲಿ ಉಪಾಹಾರ ಸೇವಿಸುತ್ತಾರೆ. ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮ ಅಳವಡಿಸಿಕೊಂಡು ಉಪಾಹಾರ ಸಿದ್ಧಪಡಿಸಿ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾ ಧಿಕಾರಿ ಎಚ್‌.ಎನ್‌. ಮಂಜುನಾಥ್‌ ವಿವರ ನೀಡಿದರು.

ಪುರಸಭೆಯಿಂದ ಇಂದಿರಾ ಕ್ಯಾಂಟೀನ್‌ ಮುಂದೆ ತರಕಾರಿ ಮಾರಾಟ ಮಾಡುವವರಿಗೆ ಅಂತರ ಕಾಪಾಡಲು ಅನುವಾಗುವಂತೆ ಬಾಕ್ಸ್‌ ಗುರುತು ಮಾಡಿದ್ದು ನಿಗ ದಿತ ಸಮಯದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಗ್ರಾಹಕರಿಗೂ ಬಾಕ್ಸ್‌ ರಚಿಸಲಾಗಿದೆ ಎಂದು ವಿವರ ನೀಡಿದರು. ಪುರಸಭೆಯ ಪರಿಸರ ಇಂಜಿನಿಯರ್‌ ಶ್ರೇಯಸ್‌, ವಕ್ತಾರ ಶಾಮಿಯಾನ ಚಂದ್ರು, ಗುತ್ತಿಗೆದಾರ ಸಿದ್ದಪ್ಪ, ಎ. ಮಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next