Advertisement

ಸರ್ಕಾರಕ್ಕೆ ತಟ್ಟಲಿದೆ ರೈತರ ಶಾಪ: ಡಿಕೆಶಿ

06:19 PM Jan 27, 2021 | Team Udayavani |

ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಂತ್ಯದ ದಿನ ಹತ್ತಿರ ಬರುತ್ತಿದೆ. ಈ ಸರ್ಕಾರ ರೈತ ವಿರೋಧಿ ಎನ್ನಲು ದೆಹಲಿಯಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವೇ ಸಾಕ್ಷಿಯಾಗಿದ್ದು, ರೈತರ ಶಾಪ ತಟ್ಟಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಮಂಗಳವಾರ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಐಷಾರಾಮಿ ಕಾರುಗಳು ಮಾತ್ರ ಓಡಾಡಬೇಕಾ? ರೈತರಿಲ್ಲದೆ ಬೆಂಗಳೂರಿನವರಿಗೆ ಊಟ ಸಿಗುತ್ತಾ? ರೈತರ ಮಕ್ಕಳೆಂದು ಶಾಲು ಹಾಕಿಹೊಂಡು ಅ ಧಿಕಾರ ನಡೆಸುವವರು ರೈತರ ಟ್ರ್ಯಾಕ್ಟರ್‌ ಯಾಕೆ ಬಿಡುವುದಿಲ್ಲ. ಕೇಂದ್ರ ಮತ್ತು
ರಾಜ್ಯ ಸರ್ಕಾರದ ವೈಫಲ್ಯಗಳನ್ನು ವಿಪಕ್ಷಗಳು ಮತ್ತು ವಿವಿಧ ಸಂಘಟನೆಯವರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಸರ್ಕಾರವನ್ನು ಪ್ರಶ್ನಿಸಿರಲಿಲ್ಲವೇ ಎಂದರು.

ಓದಿ :    ಅಲೌಕಿಕ ಮಾರ್ಗದ ಬೆಳಕು

Advertisement

Udayavani is now on Telegram. Click here to join our channel and stay updated with the latest news.

Next