Advertisement

ಗಂಧದ ಕಳ್ಳನ ಬಂಧನ

12:06 PM Sep 26, 2021 | Team Udayavani |

ಚಿಕ್ಕಮಗಳೂರು: ತಾಲೂಕಿನ ಕಾಮೇನಹಳ್ಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಬಿಡುಬಿಟ್ಟುಶ್ರೀಗಂಧ ಮರಗಳನ್ನು ಕಡಿದು ಗಂಧ ತೆಗೆಯುವ ವೇಳೆ ಕಾರ್ಯಾಚರಣೆ ನಡೆಸಿದಅರಣ್ಯ ಇಲಾಖೆ ಸಿಬ್ಬಂದಿ ತಮಿಳುನಾಡು ಮೂಲದ ರಮೇಶ ಎಂಬಾತನನ್ನು ಬಂಧಿ ಸಿಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ತಮಿಳುನಾಡು, ಆಂದ್ರಪ್ರದೇಶಮೂಲದ ಶ್ರೀಗಂಧ ಕಳ್ಳಸಾಗಣೆ ತಂಡ ಚುರ್ಚೆಗುಡ್ಡ, ಕಾಮೇನಹಳ್ಳಿ ಅರಣ್ಯಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿದ್ದರು. ಖಚಿತಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಶ್ರೀಗಂಧಕಳ್ಳನನ್ನು ಬಂಧಿಸಿದ್ದಾರೆ.

ಮೂರು ಜನ ಶ್ರೀಗಂಧ ಕಳ್ಳರು ತಪ್ಪಿಸಿಕೊಂಡಿದ್ದು, ಅವರಬಂಧನಕ್ಕೆ ಬಲೆ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿ ಕಾರಿಸ್ವಾತಿ, ಸಿಬ್ಬಂದಿ ವಸಂತ, ನಂದೀಶ್‌, ಸುನೀಲ್‌, ಮೊಹಮ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next