Advertisement

ಸಿನಿಮಾ ಕ್ಷೇತ್ರಕ್ಕೆ ನಟ ಪುನೀತ್‌ ಕೊಡುಗೆ ಅಪಾರ

03:47 PM Nov 11, 2021 | Team Udayavani |

ಕೊಟ್ಟಿಗೆಹಾರ: ಸಿನಿಮಾ ಕ್ಷೇತ್ರಕ್ಕೆ ನಟ ಪುನೀತ್‌ ರಾಜಕುಮಾರ್‌ಅವರ ಕೊಡುಗೆ ಅಪಾರ ಎಂದು ಕೊಟ್ಟಿಗೆಹಾರದ ಫ್ರೆಂಡ್ಸ್‌ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷನಾಗೇಶ್‌ ಹೇಳಿದರು.

Advertisement

ಕೊಟ್ಟಿಗೆಹಾರದಲ್ಲಿ ಶುಕ್ರವಾರ ಪ್ರಂಡ್ಸ್‌ ಆಟೋ ಚಾಲಕರಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ ಪುನೀತ್‌ರಾಜಕುಮಾರ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಬಾಲ್ಯದಿಂದಲೂ ತನ್ನ ನಟನೆಯಿಂದ ಜನಮನಸೂರೆಗೊಂಡ ಪುನೀತ್‌ ಅವರು ತಂದೆಯವರ ಪ್ರಭಾವಲಯದ ನಡುವೆ ಇದ್ದರೂ ಕೂಡ ತಮ್ಮ ನಟನೆಯ ಮೂಲಕತಮ್ಮದೇ ಆದ ಛಾಪನ್ನು ಮೂಡಿಸಿದ್ದರು.

ಡಾ| ರಾಜ್‌ಕುಮಾರ್‌ಅವರ ಸರಳತೆ, ವಿನಯವನ್ನು ಮೈಗೂಡಿಸಿಕೊಂಡು ಸ್ಟಾರ್‌ನಟನಾದರೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು.ತೆರೆಯ ಮೇಲೆ ಮಾತ್ರವಲ್ಲದೇ ತಮ್ಮ ಹಲವಾರು ಸಾಮಾಜಿಕಕಾರ್ಯಗಳ ಮೂಲಕ ತೆರೆಯ ಹಿಂದೆಯೂ ಕೂಡನಾಯಕರಾಗಿದ್ದರು ಎಂದರು.ಈ ಸಂದರ್ಭದಲ್ಲಿ ಪುನೀತ್‌ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ ಮೇಣದಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಗ್ರಾಪಂ ಮಾಜಿ ಸದಸ್ಯ ಸೋಮೇಶ್‌, ಸಂಘದಗೌರವಾಧ್ಯಕ್ಷ ವೇಣುಗೋಪಾಲ್‌ ಪೈ, ಕಾರ್ಯದರ್ಶಿರಮೇಶ್‌, ಮಾಜಿ ಅಧ್ಯಕ್ಷ ದೇವೇಂದ್ರ, ಸದಸ್ಯರಾದ ಪ್ರಸಾದ್‌,ದೀಪಕ್‌, ಪೂರ್ಣೇಶ್‌, ಜಗದೀಶ್‌, ಗಣೇಶ್‌, ದಿನೇಶ್‌,ಶರಣ್‌, ಮಹೇಂದ್ರ, ದಿಲೀಪ್‌, ಶಿವಪ್ರಸಾದ್‌, ಮದನ್‌,ಸುಲೈಮಾನ್‌, ವಿಜಯ್‌ ಶಿಕ್ಷಕ ಭಕ್ತೇಶ್‌ ಮುಂತಾದವರುಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next