Advertisement

ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ ಹಬ್ಬ

03:24 PM Oct 21, 2021 | Team Udayavani |

ಶೃಂಗೇರಿ: ರೈತರ ಹಬ್ಬವೆಂದೇ ಭಾವಿಸಲಾಗಿರುವ ಭೂಮಿ ಹುಣ್ಣಿಮೆಹಬ್ಬವನ್ನು ತಾಲೂಕಿನಾದ್ಯಾಂತ ಶ್ರದ್ಧಾ ಭಕ್ತಿಯಿಂದ ಬುಧವಾರಆಚರಿಸಲಾಯಿತು.ಸೂರ್ಯ ಉದಯಿಸುವುದಕ್ಕೂ ಮುನ್ನವೇ ರೈತರು ಭೂಮಿಪೂಜೆಮಾಡಲು ಅಗತ್ಯ ತಯಾರಿಯೊಂದಿಗೆ ತಮ್ಮ ಜಮೀನಿಗೆ ತೆರಳಿ ಪೂಜೆಸಲ್ಲಿಸಿದರು.

Advertisement

ರೈತರು ಹಬ್ಬಕ್ಕಾಗಿ ವಿಶೇಷ ತಯಾರಿ ನಡೆಸಿದ್ದರು. ತಮ್ಮಜಮೀನಿನಲ್ಲಿ ತಳಿರು, ತೋರಣ, ಬಾಳೆ ಕಂಬ ನೆಟ್ಟು,ರಂಗೋಲಿ ಹಾಕಿಹಬ್ಬದ ಸಿದ್ದತೆ ನಡೆಸಿದರು. ತೋಟಗಳಲ್ಲಿ ಅಡಕೆ,ಬಾಳೆ ಮರಗಳಿಗೆಕೆಮ್ಮಣ್ಣು,ಸುಣ್ಣ ಬಳಿದು, ತಳಿರು ತೋರಣ, ಹೂವಿನ ಹಾರ ಹಾಕಿಶೃಂಗರಿಸಿದ್ದರು. ಅರಿಶಿನ ಕುಂಕುಮ, ಗಂಧ ಲೇಪಿಸಿ ಪೂಜೆ ಸಲ್ಲಿಸಿದರು.

ಭೂತಾಯಿಗೆ ಬೆರಕೆ ಸೊಪ್ಪಿನ ಪಲ್ಯ, ಮೊಸರನ್ನ, ತುಪ್ಪನ್ನ, ಚಿತ್ರನ್ನ,ಕೋಸಂಬರಿ, ಪಾಯಸ ಸಮರ್ಪಿಸಿದರು.ನಂತರ ಭತ್ತದ ಗದ್ದೆಗಳಲ್ಲಿಯೂವಿಶೇಷ ಪೂಜೆ ಸಲ್ಲಿಸಿ, ತೋಟ ಹಾಗೂ ಗದ್ದೆಗಳಿಗೆ ಪ್ರಸಾದವನ್ನು ಚೆಲ್ಲಿದರು.

ಮನೆ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿ ಸಂಭ್ರಮಿಸಿದರು. ಭೂಮಿಹುಣ್ಣಿಮೆಯ ಮರುದಿನ ಭೂಮಿಯು ಬಲಿಯುವುದು ಎಂಬ ನಂಬಿಕೆಇರುವ ಹಿನ್ನಲೆಯಲ್ಲಿ ಭೂಮಿಗೆ ಪೆಟ್ಟು ಮಾಡಬಾರದು ದೃಷ್ಠಿಯಿಂದಕಾರ್ಮಿಕರು ಗುರುವಾರ ಕಾಯಕದಿಂದ ದೂರ ಉಳಿಯುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next