Advertisement

Chikkaballapura; ಲಂಚ ಸ್ಪೀಕರಿಸುವ ವೇಳೆ ಲೋಕಾ ಬಲೆಗೆ ಬಿದ್ದ ಭೂ ವಿಜ್ಞಾನಿ

04:19 PM Feb 19, 2024 | Team Udayavani |

ಚಿಕ್ಕಬಳ್ಳಾಪುರ: ಲಂಚ ಸ್ಪೀಕರಿಸುವ ವೇಳೆ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿಯ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾ ಬಲೆಗೆ ಬಿದ್ದ ಭೂ ವಿಜ್ಞಾನಿಯನ್ನು ಚೇತನ್ ಎಂದು ಗುರುತಿಸಲಾಗಿದೆ.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಸಮೀಪ ಗ್ರಾನೈಟ್ ಪರವಾನಿಗೆ‌ ನೀಡುವ ಸಂಬಂದ ಚೇತನ್ ಒಂದು ಲಕ್ಷ ರೂ, ಗೆ ಬೇಡಿಕೆಯಿಟ್ಟಿದ್ದ. 25000 ಸಾವಿರ ರೂ. ಮೊದಲೇ ಪಡೆದಿದ್ದ. ಸೋಮವಾರ 35,000 ರು ಹಣ ಸ್ಪೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಕಚೇರಿಯ ಮೇಲೆ ದಾಳಿ ನಡೆಸಿ ಲಂಚದ ಹಣದ ಸಮೇತ ಆರೋಪಿ ಚೇತನ್ ಎಂಬಾತನನ್ನು ಲೋಕಾ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಗಣಿ ಉದ್ಯಮಿ ಬೆಂಗಳೂರು ಮೂಲದ ಶ್ರೀನಾಥ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಕಾರ್ಯಚರಣೆ ವೇಳೆ ಡಿವೈಎಸ್ ಪಿ ವಿರೇಂದ್ರಕುಮಾರ್, ಇನ್ಸ್ ಪೆಕ್ಟರ್ ಶಿವಪ್ರಸಾದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next