Advertisement

Chikkaballapur; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮಗ ಸ್ಥಳದಲ್ಲೇ ಸಾವು, ತಂದೆಗೆ ಗಾಯ

09:14 PM Aug 16, 2024 | Team Udayavani |

ಚಿಕ್ಕಬಳ್ಳಾಪುರ:ಟೊಮ್ಯಾಟೊ ಸಾಗಿಸುತ್ತಿದ್ದ ಟ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಓರ್ವ ಸಾವನ್ನಪ್ಪಿ, ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಅವಘಡ ಶುಕ್ರವಾರ (ಆ 16) ನಡೆದಿದೆ.

Advertisement

ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ನೆರ್ನಕಲ್ಲು ಗ್ರಾಮದ ಅಶ್ವತಪ್ಪ(50) ಗಾಯಗೊಂಡಿದ್ದು, ಅವರ ಪುತ್ರ ಪುತ್ರ ಭಾರ್ಗವ್(18) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಚಿಂತಾಮಣಿ ತಾಲೂಕಿನ ಹಿರೇ ಕೆಟ್ಟಿಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆರ್ನಕಲ್ಲು ಗ್ರಾಮದ ಅಶ್ವತಪ್ಪ ಮತ್ತು ಮಗ ಭಾರ್ಗವ ಟ್ಯಾಕ್ಟರ್ ಗೆ ಟೊಮ್ಯಾಟೋ ಕ್ರಿಯೇಟಗಳನ್ನು ಹಾಕಿಕೊಂಡು ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಗೆ ಬೆಳಗಿನ ಜಾವ ಸುಮಾರು ಐದು ಗಂಟೆಗೆ ಬರುತ್ತಿದ್ದ ವೇಳೆ ಚಿನ್ನಸಂದ್ರದ ಭಾರತ್ ಪೆಟ್ರೋಲ್ ಬ್ಯಾಂಕ್ ಸಮೀಪ ಬೆಂಗಳೂರು ಕಡೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕೋಲಾರ ತಾಲೂಕಿನ ನರಸಾಪುರ ಇಂಡಸ್ಟ್ರಿಯಲ್ ಏರಿಯಾದ ಖಾಸಗಿ ಕಂಪನಿಗೆ ಸೇರಿದ ಖಾಸಗಿ ಬಸ್ ಚಾಲಕ ಅತಿ ವೇಗದಿಂದ ಬಂದು ಟ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನ ಇಂಜಿನ್ ಮತ್ತು ಟ್ರಾಲಿ ಬೇರೆ ಬೇರೆಯಾಗಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಶ್ವತ್ಥಪ್ಪ ಅವರಿಗೆ ಗಾಯಗಳಾಗಿದ್ದು, ಟ್ರ್ಯಾಕ್ಟರ್ ಇಂಜಿನ್ ಪಕ್ಕದಲ್ಲಿ ಕುಳಿತಿದ್ದ ಗ ಭಾರ್ಗವ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭಾರ್ಗವ ಐಟಿಐ ವ್ಯಾಸಂಗ ಮಾಡುತ್ತಿದ್ದ ಎಂದು ಗೊತ್ತಾಗಿದೆ.

Advertisement

ಘಟನೆಯ ವಿಷಯ ತಿಳಿದ ತತ್ ಕ್ಷಣ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next