Advertisement

ರಸ್ತೆ ಅಭಿವೃದ್ಧಿಗೆ ಕ್ರಮ: ಭಂಡಾರಿ ಶ್ರೀನಿವಾಸ್‌

06:44 PM Apr 16, 2021 | Team Udayavani |

 

Advertisement

ಕಡೂರು: ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿರುವಂತೆ ಹಾಗೂ ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಹೇಳಿದರು.

ಗುರುವಾರ ಪಟ್ಟಣದ 14ನೇ ವಾರ್ಡಿನ ತ್ಯಾಗರಾಜನಗರದ ರೈಲ್ವೆ ಗೇಟ್‌ ಬಳಿ ಪುರಸಭೆಯ 15ನೇ ಹಣಕಾಸು ನಿಧಿಯಿಂದ ಸುಮಾರು 18 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು . 6 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಅಶ್ವಿ‌ನಿ ವೈನ್ಸ್‌ ಮುಂಭಾಗದ ರಸ್ತೆಯಿಂದ ತ್ಯಾಗರಾಜನಗರದ ವೃತ್ತದ ಎಂಎಸ್‌ಆರ್‌ ಪಾರ್ಕ್‌ವರೆಗೆ ಹಾಗೂ 12.75 ಲಕ್ಷ ರೂ ವೆಚ್ಚದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯಿಂದ ದುರ್ಗಾ ಕಾಂಪ್ಲೆಕ್ಸಿನ ಎದುರಿನ ರಸ್ತೆಯವರೆಗೆ ಡಾಂಬರೀಕರಣ ನಡೆಯಲಿದೆ ಎಂದು ತಿಳಿಸಿದರು . ಪುರಸಭಾ ಸದಸ್ಯರಾದ ಶ್ರೀಕಾಂತ್‌ , ಸೈಯ್ಯದ್‌ ಯಾಸೀನ್‌, ಕಂದಾಯ ನಿರೀಕ್ಷಕ ವಿರೂಪಾಕ್ಷ, ಇಂಜಿನಿಯರ್‌ ರಂಜಿತ್‌, ಗುತ್ತಿಗೆದಾರ ಅನಿಲ್‌ ಕುಮಾರ್‌, ಮುಖಂಡರಾದ ಚಿನ್ನರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next