Advertisement

ರಂಗಶಂಕರಕ್ಕೆ ಮುಖ್ಯಮಂತ್ರಿ ಪ್ರವಾಸ

12:09 PM Nov 11, 2017 | Team Udayavani |

ನಾಡಿನೆಲ್ಲೆಡೆ ಚುನಾವಣೆ ಕಾವು ರಂಗೇರಿದೆ. ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ರಾಜಕೀಯ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು, “ಮುಖ್ಯಮಂತ್ರಿ’ ನಾಟಕವನ್ನು ನೋಡಿಬಿಡಿ. ಈಗಾಗಲೇ 600ಕ್ಕೂ ಅಧಿಕ ಪ್ರದರ್ಶನ ಕಂಡ ಹಿರಿಮೆಯಲ್ಲಿರುವ “ಮುಖ್ಯಮಂತ್ರಿ’ ರಂಗಪ್ರಯೋಗವನ್ನು ಎಷ್ಟು ಸಲ ನೋಡಿದರೂ, ನಗುವೇನು ಬತ್ತುವುದಿಲ್ಲ.

Advertisement

ಯಾವುದೇ ನಾಡಿನಲ್ಲಿ ಯಾವ ಕಾಲಕ್ಕೂ ಪ್ರಸ್ತುತ ಎನ್ನುವಂಥ ರಾಜಕೀಯ ದೃಶ್ಯವನ್ನು ಕಣ್ಮುಂದೆ ತರುವ ಮುಖ್ಯಮಂತ್ರಿ ನ.16, 17ರಂದು ಎರಡು ಪ್ರದರ್ಶನಗಳನ್ನು ಕಾಣುತ್ತಿದೆ. ಕಲಾಗಂಗೋತ್ರಿ ಪ್ರಸ್ತುತಿಪಡಿಸುವ ಈ ನಾಟಕಕ್ಕೆ 37 ವಸಂತಗಳು ತುಂಬುತ್ತಿವೆ. ರಾಜ್ಯದಲ್ಲಿ ಹತ್ತಾರು ಮುಖ್ಯಮಂತ್ರಿಗಳು ಬದಲಾದರೂ, ಈ “ಮುಖ್ಯಮಂತ್ರಿ’ಯ ಸ್ಥಾನಕ್ಕೆ ಚ್ಯುತಿಯಿಲ್ಲ!

ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ನ.16- 17, ಗುರುವಾರ- ಶುಕ್ರವಾರ, ರಾ.7.30
ಪ್ರವೇಶ: 100 ರೂ.

Advertisement

Udayavani is now on Telegram. Click here to join our channel and stay updated with the latest news.

Next