Advertisement

ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ನಿಂದ 25 ಸಾವಿರ ದೇಣಿಗೆ

09:17 AM Mar 30, 2020 | sudhir |

ತೆಕ್ಕಟ್ಟೆ : ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್‌ 19 ವೈರಸ್‌ ತಡೆಗಟ್ಟಲು ಇಡೀ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ ಡೌನ್‌ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಇದರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆ ನೀಡಿದ ಈ ಅವಧಿಯಲ್ಲಿ ಸಾರ್ವಜನಿಕರು ಸಂಯಮದಿಂದ ಬದುಕೋಣ ಹಾಗೂ ಸಾರ್ವಜನಿಕರು ಸರಕಾರದ ತುರ್ತು ಕಾರ್ಯಚಟುವಟಿಕೆಗೆ ದೇಣಿಗೆ ನೀಡಲಿಚ್ಛಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಹಾಗೂ ಗ್ರಾ.ಪಂ.ಸದಸ್ಯರ ಗೌರವ ಧನ, ಪಿಡಿಓ ಅವರ ಮೂರು ದಿನದ ವೇತನ ಹಾಗೂ ಗ್ರಾ.ಪಂ.ಸಿಬಂದಿಗಳ ಒಂದು ದಿನದ ವೇತನಗಳು ಸೇರಿ ದೇಣಿಗೆಯಾಗಿ ರೂ. 25 ಸಾವಿರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಗ್ರಾ.ಪಂ. ಅಧ್ಯಕ್ಷೆ ಸವಿತಾ ಅವರು ಪಿಡಿಒ ರೇಖಾ ಅವರಿಗೆ ಮಾ.29 ರಂದು ಚೆಕ್‌ ಹಸ್ತಾಂತರಿಸಿದರು.

Advertisement

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪವಿತ್ರಾ ಅಡಿಗ, ಗ್ರಾ.ಪಂ. ಸದಸ್ಯರಾದ ಜಲಜಾ, ಜ್ಯೋತಿ, ಸುಮತಿ, ರಾಜೀವಿ ಆಚಾರ್ಯ, ರಾಜಶ್ರೀ, ಅತುಲ್‌ ಕುಮಾರ್‌ ಶೆಟ್ಟಿ, ಜಗನ್ನಾಥ ಶೆಟ್ಟಿ, ಚಂದ್ರಶೇಖರ್‌ ಶೆಟ್ಟಿ, ಚಂದ್ರಕಾಂಚನ್‌, ಗಣೇಶ್‌ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ಕಾರ್ಯದರ್ಶಿ ವಿನಿತಾ, ಸಿಬಂದಿಗಳಾದ ಕೃಷ್ಣ ಭಂಡಾರಿ, ನವ್ಯ, ಗೋವಿಂದರಾಜ್‌, ನಿತ್ಯಾನಂದ, ಬೇಬಿ, ವಸಂತಿ ಹಾಗೂ ಭವ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next