Advertisement

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

03:00 AM Oct 21, 2024 | Team Udayavani |

ರಾಯ್‌ಪುರ: ವ್ಯಕ್ತಿಯೊಬ್ಬ ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ಶಿವಲಿಂಗದ ಮೇಲೆ ಅರ್ಪಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಛತ್ತೀಸ್‌ಗಢದ ದುರ್ಗ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಮೂಲಗಳ ಪ್ರಕಾರ ಆರೋಪಿಯು ತಮ್ಮ ಮನೆಯಲ್ಲಿ ತನ್ನ ಅಜ್ಜಿಯನ್ನು ತ್ರಿಶೂಲದಿಂದ ತಿವಿದು ಕೊಂದು ಶಿವ ದೇವಾಲಯದಲ್ಲಿ ರಕ್ತ ಅರ್ಪಿಸಿದ್ದಾನೆ. ಅನಂತರ ಮನೆಗೆ ಹಿಂದಿರುಗಿ ತನ್ನ ಕುತ್ತಿಗೆಗೆ ಸ್ವತಃ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೂಢನಂಬಿಕೆಯ ಕಾರಣದಿಂದ ನರಬಲಿ ಮಾದರಿಯ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next