Advertisement

ಚತ್ತೀಸ್‍ಗಢ: ದಂತೇವಾಡದಲ್ಲಿ10 ನಕ್ಸಲರು ಶರಣಾಗತಿ

06:55 PM Jan 10, 2023 | Team Udayavani |

ದಂತೇವಾಡ: ಛತ್ತೀಸ್‌ಗಡದ ದಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಕನಿಷ್ಠ 10 ಮಂದಿ ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ.

Advertisement

ಮಾವೋವಾದಿ ಚಳವಳಿಯನ್ನು ತೊರೆದು ನಕ್ಸಲರು ಪೊಲೀಸರ “ಲೋನ್‌ ವರಟ್ಟು’ (ನಿಮ್ಮ ಗ್ರಾಮಕ್ಕೆ ಮರಳಿ) ಅಭಿಯಾನದ ಅಡಿ ಮುಖ್ಯವಾಹಿನಿಗೆ ಮರಳಿದ್ದಾರೆ.

ವಿಶೇಷವೆಂದರೆ, 10 ಮಂದಿಯ ಪೈಕಿ 8 ನಕ್ಸಲರು ಮೋಸ್ಟ್‌ ವಾಂಟೆಡ್‌ ಆಗಿದ್ದು, ಅವರನ್ನು ಹಿಡಿದುಕೊಟ್ಟವರಿಗೆ ಸರ್ಕಾರ 8 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ನಗದು ಬಹುಮಾನ ಘೋಷಿಸಿತ್ತು.

ಇವರೆಲ್ಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಿಆರ್‌ಪಿಎಫ್ ಪ್ರಮುಖ ಪಾತ್ರ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ 2020ರಿಂದ ಒಟ್ಟಾರೆ 578 ನಕ್ಸಲರು ಶರಣಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next